Advertisement

ವಿಟ್ಲ : ಸೂರಿಕುಮೇರು ಬಳಿ ಭೀಕರ ಅಪಘಾತ, ತೂಫಾನ್ ಚಾಲಕ ಗಂಭೀರ

09:43 PM Jul 07, 2022 | Team Udayavani |

ವಿಟ್ಲ: ಟ್ಯಾಂಕರ್ ಹಾಗೂ ತೂಫಾನ್ ವ್ಯಾನ್ ನಡುವೆ ಸೂರಿಕುಮೇರು ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದ್ದು ತೂಫಾನ್ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ತೂಫಾನ್ ಚಾಲಕನನ್ನು ಸೇರಾ ನಿವಾಸಿ ಸುರೇಂದ್ರ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ತೂಫಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

ಸೇರದಲ್ಲಿರುವ ಗೇರು ಬೀಜದ ಫ್ಯಾಕ್ಟರಿಗೆ ಬರುವ ಕೆಲಸಗಾರರನ್ನು ಮನೆಗೆ ಬಿಟ್ಟು ವಾಪಸಾಗುವ ಸಂದರ್ಭ ಈ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ‌ನಡೆಯುತ್ತಿದ್ದು ರಸ್ತೆಯೇ ಕಾಣದಾಗಿದೆ. ಒಂದೆಡೆ ಧಾರಾಕಾರವಾಗಿ ಸುರಿಯುವ ಮಳೆ ಇನ್ನೊಂದೆಡೆ ರಸ್ತೆ ಕಾಮಗಾರಿಯ ಪರಿಣಾಮ ಉಂಟಾದ ಅಲ್ಲೋಲ ಕಲ್ಲೋಲ. ಅಪಘಾತ ಸಂಭವಿಸಲು ಇದೇ ಎರಡು ಕಾರಣವೆನ್ನಲಾಗಿದೆ.

ವಿಟ್ಲ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ 1,093 ರೈತ ಉತ್ಪಾದಕ ಸಂಸ್ಥೆ ರಚನೆ: ನಳಿನ್‌ಕುಮಾರ್‌ ಕಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next