Advertisement

ಬೈಕ್‌ಗೆ ಲಾರಿ ಢಿಕ್ಕಿ: ಎರಡು ತಂಡಗಳ ನಡುವೆ ಹಲ್ಲೆ; ದೂರು-ಪ್ರತಿದೂರು

10:02 PM May 15, 2022 | Team Udayavani |

ವಿಟ್ಲ : ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ಬೈಕ್‌ಗೆ ಲಾರಿ ಢಿಕ್ಕಿಯಾದ ವಿಚಾರದಲ್ಲಿ ಎರಡು ತಂಡಗಳ ನಡುವೆ ಘರ್ಷಣೆ ನಡೆದು ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

Advertisement

ಈ ಪ್ರಕರಣದಲ್ಲಿ ರಕ್ಷಿತ್‌ ಮತ್ತು ಗಿರೀಶ್‌ ಗಂಭೀರ ಗಾಯಗೊಂಡಿದ್ದಾರೆ. ಕೇಪು ನಿವಾಸಿ ಗಣೇಶ್‌ ಅವರ ಬೈಕ್‌ಗೆ ಲಾರಿ ಢಿಕ್ಕಿಯಾಗಿ ಸವಾರನ ಕೈಗೆ ಗಾಯವಾಗಿತ್ತು. ಈ ಬಗ್ಗೆ ಸ್ಥಳದಲ್ಲಿದ್ದ ರಕ್ಷಿತ್‌, ಗಿರೀಶ್‌, ಕಿರಣ್‌ ಮತ್ತಿತರರಿಗೆ ಲಾರಿ ಚಾಲಕನ ಜತೆ ಮಾತಿನ ಚಕಮಕಿ ನಡೆದಿದೆಯೆನ್ನಲಾಗಿದೆ. ಲಾರಿ ಚಾಲಕ ಈ ವಿಚಾರವನ್ನು ಉಕ್ಕುಡ ದರ್ಬೆಯಲ್ಲಿರುವ ತನ್ನ ಬಂಧುಗಳಿಗೆ ತಿಳಿಸಿದ್ದಾನೆ.

ತತ್‌ಕ್ಷಣ ಉಕ್ಕುಡ ದರ್ಬೆಯ ಝುಬೈದ್‌, ಅಶ್ರಫ್‌, ಸಾದಿಕ್‌ ತಂಡ ಕಾರಿನಲ್ಲಿ ಬಂದು ಪ್ರಶ್ನಿಸಿದ್ದು, ಮತ್ತೆ ಮಾತಿನ ಚಕಮಕಿ ನಡೆದು, ಎರಡೂ ತಂಡಗಳ ನಡುವೆ ಘರ್ಷಣೆ ನಡೆದಿದೆ.

ಹಲ್ಲೆಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಇದನ್ನೂ ಓದಿ : ಉಳ್ಳಾಲ : ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು ; ಆರೋಪಿ ಪತಿ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next