Advertisement

ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್

07:49 PM May 24, 2022 | Team Udayavani |

ತಿರುವನಂತಪುರಂ: ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ(22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳದ ಕೊಲ್ಲಂ ನ್ಯಾಯಾಲಯ ಆಕೆಯ ಪತಿ ಕಿರಣ್‌ ಕುಮಾರ್‌ಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದೆ.

Advertisement

ಮೊದಲಿಗೆ ನ್ಯಾಯಾಲಯವು ಕಿರಣ್‌ಗೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಕ್ಕೆ 6 ವರ್ಷ, ವರದಕ್ಷಿಣೆಗಾಗಿ ಹಿಂಸಿಸಿದ್ದಕ್ಕೆ 2 ವರ್ಷ, ವರದಕ್ಷಿಣೆ ಪಡೆದಿದ್ದಕ್ಕಾಗಿ 6 ವರ್ಷ ಮತ್ತು ಮತ್ತೂ ಹೆಚ್ಚು ವರದಕ್ಷಿಣೆ ತರಲು ಹೇಳಿ ಹಲ್ಲೆ ನಡೆಸಿದ್ದಕ್ಕಾಗಿ 1 ವರ್ಷದ ಜೈಲುಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ:ಅಮರನಾಥ ಯಾತ್ರೆಗೆ ಹೆಚ್ಚುವರಿ ಭದ್ರತಾ ಕ್ರಮ: ಸಿಆರ್‌ಪಿಎಫ್

“ತಂದೆ ತಾಯಿ ಇಬ್ಬರಿಗೂ ಆರೋಗ್ಯ ಸರಿಯಿಲ್ಲ. ಕುಟುಂಬ ನನ್ನ ಮೇಲೇ ನಿಂತಿದೆ. ಹಾಗಾಗಿ ಶಿಕ್ಷೆಯ ಅವಧಿ ಕಡಿಮೆ ಮಾಡಿ’ ಎಂದು ಕಿರಣ್‌ ಮನವಿ ಮಾಡಿದ ನಂತರ ನ್ಯಾಯಾಲಯ ಶಿಕ್ಷೆಯನ್ನು 10 ವರ್ಷಗಳಿಗೆ ಇಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next