Advertisement

ಪ್ರಾಣಾಯಾಮ, ವ್ಯಾಯಾಮ ನನ್ನ ಆರೋಗ್ಯದ ಗುಟ್ಟು: ಸಚಿವ ನಿತಿನ್‌ ಗಡ್ಕರಿ

07:05 PM Oct 02, 2022 | Team Udayavani |

ನವದೆಹಲಿ: ಈ ಹಿಂದೆ ಸ್ವಲ್ಪ ಹೆಚ್ಚು ನಡೆದಾಡಿದರೆ ಸಾಕು ಆಯಾಸಗೊಳ್ಳುತ್ತಿದ್ದೆ. ಆದರೆ ಶನಿವಾರ ನಾಲ್ಕು ಗಂಟೆಯ ಅವಧಿಯಲ್ಲಿ ಒಟ್ಟು 22 ದುರ್ಗಾ ಪಂಡಾಲ್‌ಗ‌ಳಿಗೆ ಭೇಟಿ ನೀಡಿದ್ದೇನೆ. ಆದರೂ ಆಯಾಸವಾಗಲಿಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದರು.

Advertisement

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಪ್ರತಿದಿನ ಪ್ರಾಣಾಯಾಮ ಮತ್ತು ವೈದ್ಯರು ತಿಳಿಸಿದ ಕೆಲವು ವ್ಯಾಯಾಮಗಳನ್ನು ಮಾಡುತ್ತೇನೆ. ಇದೇ ನನ್ನ ಆರೋಗ್ಯದ ಗುಟ್ಟು,’ ಎಂದರು.

“ನನಗೆ ಎರಡು ಬಾರಿ ಕೊರೊನಾ ಸೋಂಕು ತಗುಲಿತು. ಈ ಹಿಂದೆ 135 ಕೆಜಿ ತೂಕವಿದ್ದೆ. 40 ನಿಮಿಷ ಭಾಷಣ ಮಾಡಿದರೆ ಸಾಕು ಬೆವರುತ್ತಿದ್ದೆ ಮತ್ತು ಆಯಾಸಗೊಳ್ಳುತ್ತಿದ್ದೆ. ನಂತರ ವ್ಯಾಯಾಮದ ಜತೆಗೆ ಸಾವಯವ ತರಕಾರಿಗಳನ್ನು ಬಳಸಲು ಆರಂಭಿಸಿದ ಬಳಿಕ ಸದ್ಯ 90 ಕೆಜಿ ಇದ್ದೇನೆ. ಈಗ 3 ಗಂಟೆ ನಿರಂತರವಾಗಿ ಭಾಷಣ ಮಾಡಿದರೂ ಆಯಾಸವಾಗುವುದಿಲ್ಲ,’ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next