Advertisement

ಹನುಮಾನ್‌ ದೇಗುಲಕ್ಕೆ ಯೋಗಿ ಭೇಟಿ

01:12 AM Apr 20, 2019 | mahesh |

ಚುನಾವಣಾ ಆಯೋಗ ಹೇರಿದ್ದ 3 ದಿನಗಳ ನಿರ್ಬಂಧದ ಬಳಿಕ ಶುಕ್ರವಾರ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮತ್ತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು ಅಲಿಗಂಜ್‌ನಲ್ಲಿರುವ ಐತಿಹಾಸಿಕ ಹನುಮಾನ್‌ ಸೇತು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಶುಕ್ರವಾರ ಹನುಮ ಜಯಂತಿಯೂ ಆಗಿರುವ ಕಾರಣ ದೇಗುಲಕ್ಕೆ ಭೇಟಿ ನೀಡಿದ ಅವರು, ಬಳಿಕ ಮಾತನಾಡಿ, ಸಾಂವಿಧಾನಿಕ ಸಂಸ್ಥೆಗಳಿಗೆ ಗೌರವ ನೀಡುವುದು ಬಿಜೆಪಿಯ ಸಿದ್ಧಾಂತ. ನಾನೂ ಚುನಾವಣಾ ಆಯೋಗವನ್ನು ಗೌರವಿಸುತ್ತೇನೆ ಎಂದಿದ್ದಾರೆ.

Advertisement

ನೋಡಲ್‌ ಅಧಿಕಾರಿ ನಾಪತ್ತೆ
ಪಶ್ಚಿಮ ಬಂಗಾಳದಲ್ಲಿ ಇವಿಎಂ, ವಿವಿಪ್ಯಾಟ್‌ಗಳ ಉಸ್ತು ವಾರಿ ವಹಿಸಿದ್ದ ಚುನಾವಣಾ ಆಯೋಗದ ನೋಡಲ್‌ ಅಧಿಕಾರಿ ನಾಪತ್ತೆಯಾಗಿದ್ದಾರೆ. ಗುರುವಾರ ಬೆಳಗ್ಗೆ ಚುನಾವಣಾ ಕರ್ತವ್ಯಕ್ಕೆಂದು ಹೊರಟಿದ್ದ ಅರ್ನಾಬ್‌ ರಾಯ್‌(30) ಮನೆಗೆ ವಾಪಸಾಗಿಲ್ಲ. ಕಾರು ಕಾಲೇಜೊಂದರ ಹೊರಗೆ ಪಾರ್ಕ್‌ ಮಾಡಲಾಗಿದೆ. ಮೊಬೈಲ್‌ ಸ್ವಿಚ್‌ ಆಫ್ ಆಗಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next