Advertisement

ಅಭಿವೃದ್ಧಿ ಪರಿಶೀಲನೆಗಾಗಿ ಗ್ರಾಮಗಳಿಗೆ ಭೇಟಿ

03:08 PM Nov 29, 2022 | Team Udayavani |

ಬೇತಮಂಗಲ: 9 ವರ್ಷಗಳ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರೀಶಿಲನೆ ನಡೆಸಲು ಮತ್ತು ಗ್ರಾಮಗಳಲ್ಲಿ ಇನ್ನು ಮುಂದೆ ಆಗಬೇಕಾದ ಕೆಲಸಗಳ ಪಟ್ಟಿ ಮಾಡಲು ಗ್ರಾಮಗಳಿಗೆ ಭೇಟಿ ನೀಡಿದ್ದೇನೆ ಎಂದು ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಹೇಳಿದರು.

Advertisement

ಇಲ್ಲಿಗೆ ಸಮೀಪದ ಘಟ್ಟಕಾಮದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಡಗಲ್ಲು, ಪಿಚ್ಚಹಳ್ಳಿ, ಘಟ್ಟರಾಗಡಹಳ್ಳಿ ಗ್ರಾಮಗಳಲ್ಲಿ ತಾಯಂದಿರ ಆರ್ಶೀವಾದ ಕಾರ್ಯಕ್ರಮದಲ್ಲಿ ಮಾತನಾಡಿ ದರು. ಗ್ರಾಮಗಳಲ್ಲಿ ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಿಂದಿನ ಶಾಸಕರು ಗೆದ್ದ ನಂತರ ಗ್ರಾಮಗಳಿಗೆ ತಿರುಗಿ ನೋಡುವ ಕೆಲಸ ಮಾಡಿರಲಿಲ್ಲ ಎಂದರು. ಕಳೆದ 9 ವರ್ಷಗಳಿಂದ ಶಾಸಕನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೊಂಡಿದ್ದೇನೆ ಅದರಲ್ಲೂ ಘಟ್ಟಕಾಮದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸರ್ಮಪಕ ರಸ್ತೆ ಇರಲಿಲ್ಲ ಕುಡಿವ ನೀರಿಗಾಗಿ ರಸ್ತೆಯಲ್ಲಿ ನಿತ್ಯ ನಿಲ್ಲಬೇಕಿತ್ತು. ಬೇತಮಂಗಲದಿಂದ ಬಂಗಾರ ಪೇಟೆಗೆ ತೆರಳಲು ಸರ್ಮಪಕ ರಸ್ತೆ ಇರಲಿಲ್ಲ. ಬಂಗಾರಪೇಟೆಗೆ ತೆರಳಲು ಕೆಜಿಎಫ್ ನಗರಕ್ಕೆ ಹೋಗಿ ಬಂಗಾರಪೇಟೆಗೆ ಬರಬೇಕಿತ್ತು ಆದರೆ ಇಂದು ಬಂಗಾರಪೇಟೆಗೆ ತೆರಳಲು ನೇರ ಬಸ್‌ ಸೌಕರ್ಯ ಕಲ್ಪಿಸಿಕೊಟ್ಟಿದ್ದೇನೆ. ರಸ್ತೆ ದುರಸ್ತಿ, ಶುದ್ಧ ಕುಡಿವ ನೀಡಿನ ಘಟಕ ಸ್ಥಾಪಿಸಲಾಗಿದೆ. ಮುಂದಿನ ಚುನಾವಣೆ ಜನ ಕೈ ಹಿಡಿಯುವರೆಂಬ ನಂಬಿಕೆ ಇದೆ ಎಂದರು. ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ ರವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತವನ್ನು ನೀಡಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ : ಕೋಲಾರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾಗಿದ್ದು ಸುಲಭವಾಗಿ ಜಯಗಳಿಸಲಿದ್ದಾರೆ. ಸ್ಪರ್ಧೆ ವಿಚಾರದಲ್ಲಿ ಯಾರಲ್ಲೂ ಗೊಂದಲಕ್ಕೆ ಅಸ್ಪದವಿಲ್ಲ. ಕಾಂಗ್ರೆಸ್‌ ನಲ್ಲಿ ಅಧಿಕಾರ ಅನುಭವಿಸಿ ಬಿಜೆಪಿ ಪಕ್ಷಕ್ಕೆ ಹೋಗಿರುವವರು ಭ್ರಮನಿರಸನಕ್ಕೆ ಒಳಗಾಗಿದ್ದು ಅವರನ್ನು ಮರಳಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಕಾಂಗ್ರೆಸ್‌ ಪಕ್ಷ ಒಂದು ಸಮುದ್ರವಿದ್ದಂತೆ ಎಂದರು.

ಬಿಜೆಪಿ ಮುಖಂಡರಿಂದ ಕಿರುಕುಳ: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಸ್ಥಳೀಯ ಬಿಜೆಪಿ ಮುಖಂಡರು ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಲು ನನಗೆ ಅವಕಾಶ ನೀಡದಂತೆ ತಮಗೆ ಬೇಕಾದ ಅಧಿಕಾರಿಗಳನ್ನು ಅಯಾಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಆದರೆ ಅವರ ನೀಡುವ ಕಿರುಕುಳವನ್ನು ಸಹಿಸಿಕೊಂಡಿದ್ದೇನೆ. ಬಿಜೆಪಿ ಪಕ್ಷದ ಮುಖಂಡರಿಗೆ ಜನರ ಬಳಿ ತೆರಳಲು ಯಾವುದೆ ವಿಷಯಗಳು ಇಲ್ಲ ಕೇವಲ ನನ್ನ ವಿರುದ್ಧ ಸುಳ್ಳು ಅಪಪ್ರಚಾರಗಳನ್ನು ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಅವರಿಗೆ ಜನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next