Advertisement

ದೇಗುಲಗಳಿಗೆ ನಾಗಾ ಸಾಧುಗಳು ಭೇಟಿ

02:15 PM Nov 26, 2021 | Team Udayavani |

ಬೇಲೂರು: ಉತ್ತರಾಖಂಡ್‌ ನಿಂದ ಶೃಂಗೇರಿಗೆ ತೆರಳುತ್ತಿದ್ದ ನಾಗಾ ಸಾಧುಗಳಾದ ಖಾಲಿ ಶಿಲಾಮಣಿ ಮಹೇಶ್‌ ಗಿರಿ ಮಹಾರಾಜ್‌ ಮತ್ತು ಸರಸ್ವತಿ ಗಿರಿ ಮಾತಾಜಿ ಅವರು ಬೇಲೂರು ದೇವಾಲಯಕ್ಕೆ ಭೇಟಿ ನೀಡಿ ವಿಕ್ಷೀಸಿದರು.

Advertisement

ಇಲ್ಲಿನ ರಾಷ್ಟ್ರಧರ್ಮ ಸಂಘಟನೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸಂಘಟನೆಯ ಸಂಸ್ಥಾಪಕ ಸಂತೋಷ್‌ ಕೆಂಚಾಂಬರವರು ಈ ನಾಗಾ ಸಾಧುಗಳನ್ನು ಅಡಗೂರಿನ ಇತಿಹಾಸ ಪ್ರಸಿದ್ಧ ಕಾಶೀಪುರ ದೇವಸ್ಥಾನ, ಬೇಲೂರಿನ ಹೊಯ್ಸಳೇಶ್ವರ ದೇವಸ್ಥಾನ, ಚೆನ್ನಕೇಶವ ದೇವಸ್ಥಾನಗಳಿಗೆ ಕರೆದೊಯ್ದು ಅಲ್ಲಿನ ಶಿಲ್ಪಕಲಾ ವೈಭವ, ಇತಿಹಾಸದ ಬಗ್ಗೆ ವಿವರ ನೀಡಿದರು.

ಇದನ್ನೂ ಓದಿ:- ಹೆಬ್ರಿ : ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು

ಇಲ್ಲಿನ ಶಿಲ್ಪಕಲೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ನಾಗಾ ಸಾಧುಗಳಾದ ಖಾಲೀ ಶಿಲಾಮಣಿ ಮಹೇಶ್‌ ಗಿರಿ ಮಹಾರಾಜ್‌ ಮತ್ತು ಸರಸ್ವತಿ ಗಿರಿ ಮಾತಾಜಿ, ಇಂತಹ ಅದ್ಭುತಗಳನ್ನು ನಾಶಪಡಿಸಿದ ವಿದ್ರೋಹಿ ಮನಸ್ಸುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಉಳಿದಿರುವ ಕಲಾ ವೈಭವವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next