Advertisement

ಡಾ|ಸಂಧ್ಯಾ ಎಸ್‌. ಪೈ ಅವರಿಗೆ “ವಿಶ್ವಪ್ರಭಾ ಪುರಸ್ಕಾರ’

10:14 PM Dec 08, 2022 | Team Udayavani |

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಪ್ರಭಾವತಿ ಶೆಣೈ, ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ “ವಿಶ್ವಪ್ರಭಾ ಪುರಸ್ಕಾರ-2023’ಕ್ಕೆ ಈ ಬಾರಿ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ, ಸಾಹಿತಿ ಡಾ| ಸಂಧ್ಯಾ ಎಸ್‌. ಪೈ ಆಯ್ಕೆಯಾಗಿದ್ದಾರೆ.

Advertisement

ಪ್ರಶಸ್ತಿಯು ಪ್ರಶಸ್ತಿ ಪತ್ರ, ಫ‌ಲಕದೊಂದಿಗೆ 1 ಲ.ರೂ. ನಗದು ಬಹುಮಾನ ಒಳಗೊಂಡಿದ್ದು, 2023ರ ಜನವರಿಯಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಕಾರ್ಕಳ ಯಕ್ಷ ರಂಗಾಯಣದ ಕಲಾವಿದರಿಂದ ಶಶಿರಾಜ್‌ ರಾವ್‌ ಕಾವೂರ್‌ ರಚಿಸಿದ ಡಾ| ಜೀವನ್‌ರಾಮ್‌ ಸುಳ್ಯ ನಿರ್ದೇಶನದ “ಪರಶುರಾಮ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪುರಸ್ಕಾರ ಸಮಿತಿ ಸಂಚಾಲಕ ಮರವಂತೆ ನಾಗರಾಜ ಹೆಬ್ಟಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next