Advertisement

ವಿಶ್ವನಾಥ ಅಂಚನ್‌ ಸ್ಮಾರಕ: ಹಿರಿಯರ ಫುಟ್ಬಾಲ್‌ ಪಂದ್ಯಾಟ

02:05 PM Feb 06, 2019 | |

ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್‌ ಅಸೋ. ಆಶ್ರಯದಲ್ಲಿ ಚರ್ಚ್‌ಗೇಟ್‌ನ ಕ್ರೀಡಾಂಗಣದಲ್ಲಿ ಆಯೋಜಿತ ದಿವಂಗತ ವಿಶ್ವನಾಥ ಅಂಚನ್‌ ಸಹೋದರ, ಕೆಎಸ್‌ಎ ಕಾರ್ಯಕಾರಿ ಸಮಿತಿಯ ಸದಸ್ಯ ರವಿ ಅಂಚನ್‌ ಪ್ರಾಯೋಜಿತ 2ನೇ ವಿಶ್ವನಾಥ ಅಂಚನ್‌ ಸ್ಮಾರಕ ಹಿರಿಯರ ಫುಟ್ಬಾಲ್‌ ಪಂದ್ಯಾಟದ ಉದ್ಘಾಟನೀಯ ಪಂದ್ಯವನ್ನು ಫೆ.5ರಂ ದು ರವಿ ಅಂಚನ್‌ ಅವರು ಫುಟ್ಬಾಲ್‌ಗೆ ಕಿಕ್‌ ಹೊಡೆಯುವ ಮೂಲಕ ಚಾಲನೆ ನೀಡಿದರು. 

Advertisement

ಈ ಸಂದರ್ಭ ಸಮಾರಂಭದಲ್ಲಿ ಕಾರ್ಯದರ್ಶಿಗಳಾದ ಜಯ ಎ. ಶೆಟ್ಟಿ, ಎಂ. ಪಿ. ಶೆಟ್ಟಿ, ಕಾರ್ಯಕಾರಿ ಸದಸ್ಯರಾದ ಪ್ರೇಮನಾಥ ಕೋಟ್ಯಾನ್‌, ಸಾಲ್ಫ್ಡೋರ್‌ ಡಿ’ಸೋಜಾ, ನಾರಾ ಯಣ ಜತ್ತನ್‌, ಅಂತಾರಾಷ್ಟ್ರೀಯ ಆಟಗಾರರಾದ ಸ್ಟೀವನ್‌ ಡಾೖಸ್‌, ವಿಜಿತ ಶೆಟ್ಟಿ, ಸದಾ ಉಚ್ಚಿಲ್‌, ದಯಾ ಅಂಚನ್‌ ಉಪಸ್ಥಿತರಿದ್ದರು.

ಮೊದಲನೇಯ ಪಂದ್ಯ ಏರ್‌ ಇಂಡಿಯಾ ವಿರುದ್ಧ ತರುಣ ನ್ಪೋರ್ಟಿಂಗ್‌ ತಂಡ, ಎರಡನೇ ಪಂದ್ಯ ಗೋಲ್ಡನ್‌ ಗನ್ನರ್ಸ್‌ ವಿರುದ್ಧ ಬಾಂದ್ರಾ ಪ್ಯಾಕರ್ಸ್‌ 0-0 ಗೋಲುಗಳೊಂದಿಗೆ ಡ್ರಾ ಆಯಿತು. ಮೂರನೇ ಪಂದ್ಯದಲ್ಲಿ ಕೆಎಸ್‌ಎ ತಂಡ ಆರ್ಡಿನೆನ್ಸ್‌ ಫ್ಯಾಕ್ಟರಿ ಅಂಬರನಾಥ್‌ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿತು. ಕೆಎಸ್‌ಎ ತಂಡದ ಪರವಾಗಿ ಮೆಲ್ವಿನ್‌ ವಾಜ್‌-2, ಗ್ಲೆನ್‌ ಮೊರಾಯಿಸ್‌ 1 ಗೋಲು ಹೊಡೆದರು. ಅಂಬರ್‌ನಾಥ್‌ ತಂಡದ ಪರವಾಗಿ ದಿವಾಕರನ್‌ ಏಕೈಕ ಗೋಲು ಬಾರಿಸಿದ್ದರು. ಈ ಪಂದ್ಯಾಟದ ಆರಂಭಿಕ ಹಂತದಲ್ಲಿ ಲೀಗ್‌, ಅನಂತರ  ಸೆಮಿ ಫೈನಲ್‌ ಮತ್ತು ಫೈನಲ್‌ ಪಂದ್ಯಗಳನ್ನು ಆಡಿಸಲಾಗುವುದು. ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕ್ರೀಡಾಳುಗಳನ್ನು ಪ್ರೋತ್ಸಾಹಿಸಬೇಕಾಗಿ ಕೆಸ್‌ಎ ಅಧ್ಯಕ್ಷ ಡಾ| ಪದ್ಮನಾಭ ಶೆಟ್ಟಿ ಹಾಗೂ ಕಾರ್ಯಕಾರಿ ಸದಸ್ಯರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next