Advertisement

ಚರಂಡಿಯಲ್ಲಿ ಸಿಲುಕಿಕೊಂಡ ವೃದ್ಧೆಯ ರಕ್ಷಣೆ

02:00 AM Jul 18, 2017 | Team Udayavani |

ಉಡುಪಿ: ಉಡುಪಿ ಕೋರ್ಟ್‌ ರಸ್ತೆಯ ಪಕ್ಕದ ನೀರು ಹರಿಯುವ ಚರಂಡಿಗೆ ಬಿದ್ದುಕೊಂಡು ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದ ವೃದ್ಧೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿದ್ದಾರೆ. ಜು. 11ರ ಸಂಜೆ ಮಳೆ ಸುರಿಯುತ್ತಿದ್ದು, ಸುಮರು 70 ವರ್ಷದ ವೃದ್ಧೆ ಕೊಡೆ ಹಿಡಿದು ನಡೆದುಕೊಂಡು ಕೋರ್ಟ್‌ ಹಿಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದರು. ವಾಹನಕ್ಕೆ ದಾರಿ ಬಿಟ್ಟುಕೊಡಲು ರಸ್ತೆ ಅಂಚಿಗೆ ಬಂದಾಗ ಆಯ ತಪ್ಪಿ ನೀರು ಹರಿಯುವ ಚರಂಡಿಗೆ ಬಿದ್ದು ಏಳಲಾಗದ ಪರಿಸ್ಥಿತಿಯಲ್ಲಿ ಇದ್ದರು. ಯಾರು ಕೂಡ ಅವರನ್ನು ರಕ್ಷಿಸಲು ಮುಂದೆ ಬಂದಿರಲಿಲ್ಲ.

Advertisement

ಮಾಹಿತಿ ತಿಳಿದ ವಿಶು ಶೆಟ್ಟಿ ಅವರು ಅಲ್ಲಿಗೆ ಧಾವಿಸಿ ಒದ್ದಾಡಿಕೊಂಡಿದ್ದ ವೃದ್ಧೆಯನ್ನು ಚರಂಡಿಯಿಂದ ಮೇಲಕ್ಕೆತ್ತಿ ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೃದ್ಧೆಯ ಹೆಸರು – ಸರಸು, ಊರು- ಕುಂಭಾಶಿ ಎಂದು ಹೇಳಿಕೊಂಡಿದ್ದಾರೆ. ವಾರಸುದಾರರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next