Advertisement

ಲಂಚ ತಿಂದುಕೊಂಡು ನಾಯಿಯಂತೆ ಬಿದ್ದಿರ್ತಾರೆ! ಗೃಹ ಸಚಿವರಿಂದ ಪೊಲೀಸರಿಗೆ ತರಾಟೆ;ವಿಡಿಯೋ ವೈರಲ್

04:25 PM Dec 03, 2021 | Team Udayavani |

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರರು ತೀರ್ಥಹಳ್ಳಿಯಲ್ಲಿ ನಡೆದ ದನಗಳ್ಳತನ ವಿಚಾರದಲ್ಲಿ ಸಾಕಷ್ಟು ಬೇಸರ ಮಾಡಿಕೊಂಡಿದ್ದು, ಆಕ್ರೋಶವನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.

Advertisement

ತೀರ್ಥಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ದನಗಳ್ಳರು ತಮ್ಮನ್ನು ಹಿಂಬಾಲಿಸಿದ ಸಹೋದರರ ಇಬ್ಬರ ಮೇಲೆ ವಾಹನ ಹತ್ತಿಸಿದ್ದರು. ಗಾಯಗೊಂಡ ಇಬ್ಬರಿಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಸಚಿವರು ಕೂಡಾ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದರು.

ಆದರೆ ಈ ವಿಚಾರಕ್ಕೆ ಸಂಬಂಧಿಸಿ ಆರಗ ಜ್ಞಾನೇಂದ್ರರವರು ಪೊಲೀಸ್ ಇಲಾಖೆಯನ್ನು ಮಾತಿನಲ್ಲೇ ತರಾಟೆ ತೆಗೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

ಸದ್ಯ ಹರಡುತ್ತಿರುವ ವೈರಲ್ ವಿಡಿಯೋ, ಶಾಸಕರ ಸ್ವಕ್ಷೇತ್ರದ ಕಚೇರಿಯದ್ದಾಗಿದ್ದು ಎನ್ನಲಾಗಿದೆ. ಈ ವಿಡಿಯೋದಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ಆರಗ ಜ್ಞಾನೇಂದ್ರರವರು ಚಿಕ್ಕಮಗಳೂರು ಪೊಲೀಸ್ ಅಧಿಕಾರಿಯೊಬ್ಬರನ್ನ ತರಾಟೆ ತೆಗೆದುಕೊಂಡಿದ್ದಾರೆ.

Advertisement

“ಅಲ್ಲಾರಿ ನಾನೇನು ಗೃಹಸಚಿವನಾಗಿ ಇರಬೇಕಾ ಬೇಡವಾ? ಪ್ರತಿನಿತ್ಯ ಗೋಸಾಗಾಟ ಮಾಡುವವರು ವೃತ್ತಿಪರ ಅಪರಾಧಿಗಳು, ಅವರು ಯಾರು ಎಂಬುದು ಪೊಲೀಸರಿಗೆ ಗೊತ್ತಿಲ್ಲವಾ? ಲಂಚ ತಿಂದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ. ಕನಿಷ್ಠ ಆತ್ಮಗೌರವ ಬೇಕಲ್ಲವಾ ಪೊಲೀಸರಿಗೆ? ಸಂಬಳದಲ್ಲಿ ಬದುಕಾಗದಷ್ಟು ಪರಿಸ್ಥಿತಿಯೇನು ಇಲ್ಲ. ಒಳ್ಳೆ ಸಂಬಳವೇ ಪೊಲೀಸರಿಗೆ ಸಿಗುತ್ತಿದೆ. ಆದರು ಕೆಟ್ಟು ಹಾಳಾಗಿ ಹೋಗಿದ್ದಾರೆ ಎಂದೆಲ್ಲಾ ತರಾಟೆ ತೆಗೆದುಕೊಂಡಿದ್ದಾರೆ. ಕೆಲಸ ಮಾಡಲುಕೆ ಆಗದಿದ್ದರೇ ಯೂನಿಫಾರಮ್ ಬಿಚ್ಚಿಟ್ಟು ಮನೆಗೆ ಹೋಗಲು ಹೇಳ್ರಿ” ಎಂದಿರುವ ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next