Advertisement

ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ವಿಜಯೋತ್ಸವದ ವೇಳೆ ಹಿಂಸಾಚಾರ

12:45 AM Jun 09, 2019 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲ ದಲ್ಲಿ ಶನಿವಾರ ಬಿಜೆಪಿ ವಿಜಯೋತ್ಸವವು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ, ಪೊಲೀಸರು ಸೇರಿದಂತೆ ಹಲವರು ಗಾಯಗೊಂಡ ಘಟನೆ ನಡೆದಿದೆ.

Advertisement

ವಿಜಯೋತ್ಸವಕ್ಕೆ ರಾಜ್ಯ ಸರಕಾರ ಅನುಮತಿ ನಿರಾಕರಿಸಿದ್ದರೂ, ಬಿಜೆಪಿ ಅದಕ್ಕೆ ಕ್ಯಾರೇ ಎನ್ನದೆ ಮೆರವಣಿಗೆ ಆರಂಭಿಸಿತ್ತು. ಈ ವೇಳೆ ಏಕಾಏಕಿ ಪೊಲೀಸರು ಮತ್ತು ಬಿಜೆಪಿ ಕಾರ್ಯ ಕರ್ತರ ನಡುವೆ ಘರ್ಷಣೆ ನಡೆದು, ಬುನಿಯಾದ್‌ಪುರ ಮತ್ತು ಗಂಗಾರಾಂ ಪುರದಲ್ಲಿ ಸತತ 3 ಗಂಟೆಗಳ ಕಾಲ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಪೊಲೀಸರು ಲಾಠಿಪ್ರಹಾರ ನಡೆಸಿ ದ್ದಲ್ಲದೆ, ಅಶ್ರುವಾಯು ಸಿಡಿಸಿ ಕಾರ್ಯ ಕರ್ತರನ್ನು ಚದುರಿಸಲು ಯತ್ನಿಸಿದರು. ಘಟನೆಯಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಹಲವು ಪೊಲೀಸ್‌ ವಾಹನಗಳಿಗೆ ಹಾನಿ ಉಂಟಾ ಗಿದೆ. ಘಟನೆಗೆ ಟಿಎಂಸಿ ಕಾರಣ ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿ ಹಿಂಸಾ ಚಾರ ನಡೆಸಲೆಂದೇ ಮೆರವಣಿಗೆ ಆಯೋ ಜಿಸಿತ್ತು ಎಂದು ಟಿಎಂಸಿ ಆರೋಪಿಸಿದೆ.

ಶಾ ಕಾಲೇಜು ಪ್ರಿನ್ಸಿಪಾಲ್‌: ಈ ನಡುವೆ, 2021ರ ಪ.ಬಂಗಾಲ ಚುನಾವಣೆಗೆ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ನೆರವನ್ನು ಸಿಎಂ ಮಮತಾ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಬಿಜೆಪಿ ಶನಿವಾರ ಪ್ರತಿಕ್ರಿಯಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕಿಶೋರ್‌ಗಿಂತಲೂ ಉತ್ತಮ ಕಾರ್ಯತಂತ್ರ ನಿಪುಣ. ಅಮಿತ್‌ ಶಾ ಅವರ ಕಾಲೇಜು ಪ್ರಾಂಶು ಪಾಲರಾದರೆ, ಕಿಶೋರ್‌ ಇನ್ನೂ ಆ ಕಾಲೇಜಿನ ವಿದ್ಯಾರ್ಥಿ ಅಷ್ಟೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next