Advertisement

ಅಧಿಕಾರಿ ಕಚೇರಿ ಆವರಣದಲ್ಲೇ ನೀತಿ ಸಂಹಿತೆ ಉಲ್ಲಂಘನೆ

01:03 PM Mar 30, 2023 | Team Udayavani |

ಗುಡಿಬಂಡೆ: ಪಪಂ ಅಧಿಕಾರಿಗಳು ತಹ‌ಶೀಲ್ದಾರ್‌ ಕಚೇರಿ ಆವರಣ ದಲ್ಲಿರುವ ಕಾಮಗಾರಿ ನಾಮಫಲಕಗಳು ಹಾಗೂ ಇಂದಿರಾ ಕ್ಯಾಂಟೀನ್‌ ನಾಮಫಲಕ ಹಾಗೂ ಇಂದಿರಾ ಗಾಂಧಿ ಭಾವ ಚಿತ್ರಗಳು, ರಾಜಕೀಯಮುಖಂಡರ ಹೆಸರುಗಳು ಇರುವಗೋಡೆ ಬರಹಗಳನ್ನು ತೆರವುಗೊಳಿಸಿದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

Advertisement

ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಕಾಮಗಾರಿ ನಾಮ ಫಲಕಗಳ ಮೇಲೆ ಇರುವ ರಾಜಕೀಯ ವ್ಯಕ್ತಿಹೆಸರುಗಳನ್ನು ಮುಚ್ಚದೆ, ಕಚೇರಿ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ ಬಳಿ ಇರುವ ಬೋರ್ಡ್‌, ಇಂದಿರಾ ಗಾಂಧಿ ಚಿತ್ರವನ್ನು ತೆರವುಗೊಳಿಸದೇ ಪಪಂ ಅಧಿಕಾರಿಗಳು ನೀತಿ ಸಂಹಿತ ಉಲ್ಲಂಘನೆ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು ದಿನಗಳ ಹಿಂದೆ ಚುನಾವಣಾ ಆಯೋಗವು ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಯಾವ ಸಮಯದಲ್ಲೂ ಬೇಕಾದರು ಚುನಾವಣೆ ಘೋಷಣೆ ಆಗಬಹುದು ಎಂಬ ಸುಳಿವನ್ನು ಕೊಟ್ಟು, ಸೂಕ್ತ ತುರ್ತು ಕ್ರಮಗಳನ್ನುತೆಗೆದುಕೊಳ್ಳುವಂತೆ ತಿಳಿಸಿದರು, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ತೆಗೆದು ಕೊಳ್ಳದೇ ಇರುವುದರಿಂದ ಅವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next