Advertisement

ಕಿರುತೆರೆಯಲ್ಲಿ ವಿನಯ್‌ ರಾಜ್

05:38 AM Feb 25, 2019 | |

ವಿನಯ್‌ ರಾಜಕುಮಾರ್‌ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಮೂರು ಸಿನಿಮಾಗಳು ಬಿಡುಗಡೆಯಾಗಿದೆ. ಸದ್ಯ “ಗ್ರಾಮಾಯಣ’ದಲ್ಲಿ ಬಿಝಿ. ಈ ನಡುವೆಯೇ ವಿನಯ್‌, ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹಾಗಂತ ಖಾಯಂ ಆಗಿ ಕಿರುತೆರೆಯಲ್ಲೇ ಇರುತ್ತಾರಾ ಎಂದರೆ ಖಂಡಿತಾ ಇಲ್ಲ. ಬದಲಾಗಿ ಧಾರಾವಾಹಿಯೊಂದರಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಅದು “ಮರಳಿ ಬಂದಳು ಸೀತೆ’ಯಲ್ಲಿ.

Advertisement

ದೊಡ್ಡ ಗ್ಯಾಪ್‌ನ ಬಳಿಕ ವಜ್ರೆಶ್ವರಿ ಕಂಬೈನ್ಸ್‌ ಹಾಗೂ ಪೂರ್ಣಿಮಾ ಎಂಟರ್‌ಪ್ರೈಸಸ್‌ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದು, “ಮರಳಿ ಬಂದಳು ಸೀತೆ’ ಎಂಭ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಈ ಧಾರಾವಾಹಿಯೂ ಇಂದಿನಿಂದ (ಫೆ.25) ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ವಿನಯ್‌ ರಾಜಕುಮಾರ್‌ ಈ ಧಾರಾವಾಹಿಯಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. 

ಎಲ್ಲಾ ಓಕೆ, ವಿನಯ್‌ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಅವರ ತಾಯಿ. ಹೌದು, ವಿನಯ್‌ ಅವರ ತಾಯಿಗೆ ಮಗ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತಂತೆ. ಹಾಗಾಗಿ, ವಿನಯ್‌ “ಮರಳಿ ಬಂದಳು ಸೀತೆ’ಯಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಅಂದಹಾಗೆ, ಈ ಧಾರಾವಾಹಿಯನ್ನು ಧರಣೀಶ್‌ ನಿರ್ದೇಶಿಸುತ್ತಿದ್ದು, ಕೌಶಿಕ್‌, ಮಧುಬಾಲಾ, ರಕ್ಷಿತಾ, ಅಪೇಕ್ಷಾ, ಅಶ್ವಿ‌ನಿ ಗೌಡ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next