Advertisement

ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲು ಮನವಿ

10:34 PM Nov 12, 2021 | Suhan S |

ಸೊರಬ: ವಿದ್ಯುತ್‌ ಶಾಕ್‌ ತಗುಲಿದ್ದ ತನ್ನ ತಮ್ಮನನ್ನು ಪ್ರಾಣಾಪಾಯದಿಂದ ರಕ್ಷಿಸಿರುವ ತಾಲೂಕಿನ ಉರುಗನಹಳ್ಳಿ ಗ್ರಾಮದ ಬಾಲಕಿ ಪ್ರಾರ್ಥನಾಳನ್ನು  ಶೌರ್ಯಪ್ರಶಸ್ತಿಗೆ ಆಯ್ಕೆ ಮಾಡುವಂತೆ ಆಗ್ರಹಿಸಿ ಜನ ಸಂಗ್ರಾಮ ಪರಿಷತ್‌, ಯುವ ಶಕ್ತಿ, ನಮ್ಮೂರ ಸಂಸ್ಥೆ ವತಿಯಿಂದ ಶುಕ್ರವಾರ  ತಹಶೀಲ್ದಾರ್‌ ಶಿವಾನಂದ ರಾಣೆ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಶಾಲೆಯಲ್ಲಿ ಶಿಕ್ಷಕರು  ವಿದ್ಯುತ್‌ಗೆ ಸಂಬಂಧಿಸಿ ಹೇಳಿಕೊಟ್ಟಿದ್ದನ್ನು ನೆನಪಲ್ಲಿಟ್ಟುಕೊಂಡು ಸಮಯಪ್ರಜ್ಞೆ ತೋರಿರುವ ಪ್ರಾರ್ಥನಾಳು ತಮ್ಮನ ಅಂಗಿಯ ಕಾಲರ್‌ ಹಿಡಿದೆಳೆದು ರಕ್ಷಿಸಿದ್ದಾಳೆ ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next