Advertisement

ವಿಕ್ರಾಂತ್‌ ರೋಣ ಚೆಲುವೆಗೆ ಕಂಕಣ ಭಾಗ್ಯ

11:10 AM Dec 21, 2022 | Team Udayavani |

ಸ್ಯಾಂಡಲ್‌ವುಡ್‌ ನಟಿ ನೀತಾ ಅಶೋಕ್‌ ಹಸೆಮಣೆ ಏರಲು ತಯಾರಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಸತೀಶ್‌ ಜೊತೆ ನೀತಾ ಇತ್ತೀಚೆಗಷ್ಟೇ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ.

Advertisement

ತಮ್ಮ ನಿಶ್ಚಿತಾರ್ಥ ವಿಷಯವನ್ನು ಸೋಶಿಯಲ್‌ ಮೀಡಿಯಾ ಮೂಲಕ ತಿಳಿಸಿರುವ ನೀತಾ, “ಕ್ಲಾಸ್ಮೇಟ್‌ ಟು ಸೋಲ್ಮೇಟ್‌’ ಎಂಬ ಪೋಸ್ಟ್‌ ಹಾಕುವ ಮೂಲಕ ತಮ್ಮ ನಿಶ್ಚಿತಾರ್ಥದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ವಾಹಿನಿಯ “ಯಶೋದೆ’ ಸೀರಿಯಲ್‌ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಕರಾವಳಿ ಚೆಲುವೆ ನೀತಾ ಅಶೋಕ್‌, ಆ ನಂತರ ಹಿರಿತೆರೆಯತ್ತ ಮುಖ ಮಾಡಿದ್ದರು. “ಜಬರ್ದಸ್ತ್ ಶಂಕರ’ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗಿದ್ದ ನೀತಾ ಅಶೋಕ್‌, ಅದಾದ ಬಳಿಕ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

“ವಿಕ್ರಾಂತ್‌ ರೋಣ’ ಸಿನಿಮಾದ ನಂತರ ಒಂದಷ್ಟು ಸಿನಿಮಾಗಳಲ್ಲಿ ನೀತಾ ಹೆಸರು ಕೇಳಿಬಂದಿದ್ದರೂ, ಆ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗುವ ಮೊದಲೇ ನೀತಾ ಹಸೆಮಣೆ ಏರುವ ಸುದ್ದಿ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next