Advertisement

ವಿಕ್ರಂ ವಂಚನೆ ಸೂತ್ರದಾರ 13 ದಿನ ಪೊಲೀಸ್‌ ಕಸ್ಟಡಿಗೆ

12:21 PM Apr 10, 2018 | Team Udayavani |

ಬೆಂಗಳೂರು: ವಿಕ್ರಂ ಇನ್‌ವೆಸ್ಟ್‌ಮೆಂಟ್‌ ವಂಚನೆ ಪ್ರಕರಣದ ಆರೋಪಿ ಸೂತ್ರಂ ಸುರೇಶ್‌ಗೆ 13 ದಿನಗಳ ಕಾಲ ಜಯನಗರ ಪೊಲೀಸರ ವಶಕ್ಕೆ ಆದೇಶಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

Advertisement

ಜಯನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣದ ಎಫ್ಐಆರ್‌ನಲ್ಲಿ ಹೆಸರು ಉಲ್ಲೇಖವಿಲ್ಲದಿದ್ದರೂ ತನಿಖೆ ಭಾಗವಾಗಿ ಪೊಲೀಸ್‌ ವಶಕ್ಕೆ ಆದೇಶಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಕೋರಿ ಸೂತ್ರಂ ಸುರೇಶ್‌ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ಬಿ ಬೂದಿಹಾಳ್‌ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿತು.

ಪ್ರಕರಣದ ತನಿಖೆ  ಸಲುವಾಗಿ ಅಧೀನ ನ್ಯಾಯಾಲಯದ ಆದೇಶ ಸೂಕ್ತವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಹೆಚ್ಚಿನ ಲಾಭಾಂಶ ಆಮಿಷ ತೋರಿಸಿ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪೆನಿ ಮಾಲೀಕ ರಾಘವೇಂದ್ರ ಶ್ರೀನಾಥ್‌ ಸೇರಿದಂತೆ ಮತ್ತಿತರರು 3.78 ಕೋಟಿ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಡಾ. ಬೃಂದಾ ಚನ್ನಪ್ಪ ಜಯನಗರ ಠಾಣೆಯಲ್ಲಿ ದೂರು ನೀಡಿದ್ದರು.

ಆದರೆ, ಪ್ರಕರಣದ ಎಫ್ಐಆರ್‌ನಲ್ಲಿ ಸೂತ್ರಂ  ಸುರೇಶ್‌ ಹೆಸರಿರಲಿಲ್ಲ. ಪ್ರಕರಣದ ಹೆಚ್ಚಿನ ತನಿಖೆಯ ಸಲುವಾಗಿ ಹಗರಣದ ಆರೋಪಿ ಸೂತ್ರಂ ಸುರೇಶ್‌ರನ್ನು ವಶಕ್ಕೆ ನೀಡುವಂತೆ ಪೊಲೀಸರು ಸಲ್ಲಿಸಿದ್ದ ಮನವಿಯನ್ನು  ಮಾನ್ಯ ಮಾಡಿದ್ದ ನ್ಯಾಯಾಲಯ 13 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿ ಏಪ್ರಿಲ್‌ 2ರಂದು ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next