Advertisement

ಪೊಲೀಸರನ್ನು ಕೊಲ್ಲಲು ವಿಕಾಸ್‌ ದುಬೆ ಆದೇಶಿಸಿದ್ದ

09:47 AM Jul 16, 2020 | mahesh |

ಕಾನ್ಪುರ: “ನೀವು ಗುಂಡು ಹಾರಿಸಿ ಪೊಲೀಸರನ್ನು ಹತ್ಯೆ ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನು ನಾನು ಕೊಲ್ಲುತ್ತೇನೆ’ ಎಂದು ಕುಖ್ಯಾತ ಪಾತಕಿ ವಿಕಾಸ್‌ ದುಬೆ ಬೆದರಿಕೆಯೊಡ್ಡಿದ್ದನು’ ಎಂದು ಆತನ ಸಹಚರ ಶಕ್ತಿಕಾಂತ್‌ ಪಾಂಡೆ ತಿಳಿಸಿದ್ದಾನೆ.

Advertisement

ಪೊಲೀಸರ ಹತ್ಯೆ ಪ್ರಕರಣದಲ್ಲಿ ಮಂಗಳವಾರ ಸೆರೆ ಸಿಕ್ಕಿರುವ ದುಬೆ ಸಹಚರನಾದ ಶಕ್ತಿಕಾಂತ್‌ ಪಾಂಡೆ ವಿಚಾರಣೆ ವೇಳೆ, ಈ ಕೃತ್ಯದಲ್ಲಿ ತಾನು ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

“ನನ್ನನ್ನು ಮುಗಿಸಲು ಪೊಲೀಸರು ಬಿಕ್ರು ಗ್ರಾಮಕ್ಕೆ ಬರುತ್ತಿರುವುದರ ಕುರಿತು ಪೊಲೀಸ್‌ ಠಾಣೆಯಿಂದ ಮಾಹಿತಿ ಬಂದಿದೆ. ಹೀಗಾಗಿ ಪೊಲೀಸರನ್ನು ಕೊಲ್ಲಬೇಕು’ ಎಂದು ಅತ ನಮಗೆ ಆದೇಶಿಸಿದ್ದನು. ಎಲ್ಲ ಸಹಚರರೊಂದಿಗೆ ಸಭೆ ನಡೆಸಿ, ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದನು. ಅಲ್ಲದೆ, ಪೊಲೀಸರಿಂದ ರೈಫ‌ಲ್‌, ಗನ್‌ಗಳನ್ನು ಲೂಟಿ ಮಾಡುವಂತೆ ಹೇಳಿದ್ದನು ಎಂದು ಆರೋಪಿ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next