Advertisement

ಮೊದಲ ಪತ್ನಿ ವಿರುದ್ಧ ವಿಜಿ ಆರೋಪ

12:42 PM Oct 01, 2018 | Team Udayavani |

ಬೆಂಗಳೂರು: ಜಿಮ್‌ ತರಬೇತುದಾರ ಮಾರುತಿಗೌಡ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ  ಜೈಲು ಸೇರಿರುವ ನಟ ದುನಿಯಾ ವಿಜಯ್‌, ತನ್ನ 2ನೇ ಪತ್ನಿ ಕೀರ್ತಿಗೌಡಗೆ ಭದ್ರತೆ ನೀಡುವಂತೆ ಕೋರಿ ಗಿರಿನಗರ ಠಾಣೆ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಮೊದಲ ಪತ್ನಿ ನಾಗರತ್ನ  ಕೀರ್ತಿ ಮನೆಯ ಬಳಿ ತೆರಳಿ ಗಲಾಟೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಕೀರ್ತಿ ಹಾಗೂ ನನ್ನ ಮೂವರು ಮಕ್ಕಳಿಗೆ ಅಗತ ಭದ್ರತೆ ನೀಡಿ ಎಂದು ಪತ್ರದಲ್ಲಿ ವಿಜಯ್‌ ಕೋರಿದ್ದಾರೆ.

Advertisement

ಜೈಲು ಅಧಿಕಾರಿಗಳ ಮುಖೇನ ಕಳುಹಿಸಿರುವ ಪತ್ರದಲ್ಲಿ ನಾಗರತ್ನ ಗಲಾಟೆ ನಡೆಸುವ ಸಾಧ್ಯತೆಯಿದೆ.  ಹೀಗಾಗಿ, ಕೀರ್ತಿ ಅವರ ಮನೆಯ ಸುತ್ತಲೂ ಬೀಟ್‌ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಅಲ್ಲದೆ, ಯಾವುದೇ ರೀತಿಯ ತೊಂದರೆ ಕಂಡು ಬಂದರೆ ತತ್‌ಕ್ಷಣ ಮಾಹಿತಿ ನೀಡುವಂತೆಯೂ ಅವರಿಗೆ ತಿಳಿಸಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. 

ಇಂದು ಜಾಮೀನು ಭವಿಷ್ಯ ನಿರ್ಧಾರ!: ಜಾಮೀನು ಅರ್ಜಿ ವಜಾಗೊಳಿಸಿದ್ದ ಎಸಿಎಂಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಜಯ್‌ ಹಾಗೂ ಇತರೆ ಆರೋಪಿಗಳು ಸೆಷನ್ಸ್‌ಕೋರ್ಟ್‌ ಮೊರೆಹೋಗಿದ್ದರು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಸೆಷನ್ಸ್‌ ಕೋರ್ಟ್‌, ಅ.1ಕ್ಕೆ ಆದೇಶ ಕಾಯ್ದಿರಿಸಿತ್ತು.

ಅಂಬೇಡ್ಕರ್‌ ಭವನದಲ್ಲಿ ಸೆ.22ರಂದು ನಡೆದ “32ನೇ ಅಮೇಚೂರ್‌ ಬಾಡಿ ಬಿಲ್ಡಿಂಗ್‌ ಚಾಂಪಿಯನ್‌ ಶಿಪ್‌, ಮಿಸ್ಟರ್‌ ಬೆಂಗಳೂರು -2018′ ಸ್ಪರ್ಧೆ ಕಾರ್ಯಕ್ರಮದ ವೇಳೆ ಜಿಮ್‌ ತರಬೇತುದಾರ ಮಾರುತಿ ಗೌಡ  ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಆತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ವಿಜಯ್‌ , ಪ್ರಸಾದ್‌,  ಮಣಿ, ಪ್ರಸಾದ್‌ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next