Advertisement

ವಿಜಯಪುರ: ಸಿಡಿಲು ಬಡಿದು ಮಹಿಳೆ ಸಾವು

05:43 PM Aug 03, 2022 | Team Udayavani |

ವಿಜಯಪುರ: ಎಮ್ಮೆಗಳನ್ನು ಮೇಯಿಸುತ್ತಿದ್ದ ಸಂಧರ್ಭ ಸಿಡಿಲು ಬಡಿದು ಮಹಿಳೆ ಹಾಗೂ, ಎಮ್ಮೆ ಮೃತಪಟ್ಟ ಘಟನೆ ತಾಳಿಕೋಟೆ ತಾಲೂಕಿನ ರಾಂಪೂರ ಪಿಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.

Advertisement

ಮೃತ ರೈತ ಮಹಿಳೆಯನ್ನು ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದ ಜೈನಾಬಿ ನಜೀರ ಅಹ್ಮದ್ ಸಿಪಾಯಿ (55) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಇಂಡಿ: ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಜೈನಾಬಿ ತನ್ನ ಎಮ್ಮೆಗಳನ್ನು  ಮೇಯಿಸಲು ಜಮೀನಿಗೆ ಹೋಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅವರಿಗೆ ಸೇರಿದ ಎಮ್ಮೆಯೂ ಸಾವನ್ನಪ್ಪಿದೆ. ವಿಷಯದ ತಿಳಿದ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next