Advertisement

ವಿಜಯಪುರ ಸಿದ್ಧೇಶ್ವರ ಜಾತ್ರೆ: ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧಕ್ಕೆ ಯತ್ನಾಳ್ ಗೆ ಮನವಿ

09:36 PM Dec 07, 2022 | Team Udayavani |

ವಿಜಯಪುರ: ಬರುವ ಸಂಕ್ರಾಂತಿಗೆ ನಡೆಯಲಿರುವ ವಿಜಯಪುರ ಶ್ರೀಸಿದ್ಧೇಶ್ವರ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳು ಶ್ರೀಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಮನವಿ ಮಾಡಿವೆ.

Advertisement

ರಾಜ್ಯದ ಹಲವು ಕಡೆಗಳಲ್ಲಿ ದೊಡ್ಡ ಮಟ್ಟದ ಧಾರ್ಮಿಕ ದಳ್ಳುರಿಗೆ ಕಾರಣವಾಗಿದ್ದ ಜಾತ್ರೆ-ಉತ್ಸವ ಗಳಲ್ಲಿ ಧರ್ಮ ಆಧಾರಿತ ವ್ಯಾಪಾರದ ಕೂಗು ಇದೀಗ ವಿಜಯಪುರ ಜಿಲ್ಲೆಗೂ ಪ್ರವೇಶಿಸುವಂತೆ ಕಾಣುತ್ತಿದೆ. ವಿಜಯಪುರ ಶ್ರೀಸಿದ್ಧೆಶ್ವರ ಜಾತ್ರೆಗೆ ಮುಸ್ಲಿಂರನ್ನು ನಿಷೇಧಿಸಬೇಕು ಎಂದು ಬುಧವಾರ ನಡೆದ ಜಾತ್ರಾ ಉತ್ಸವ ಸಮಿತಿ ಸಭೆಯ ಸಂದರ್ಭದಲ್ಲಿ ಶ್ರೀಸಿದ್ಧೆಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಶ್ರೀರಾಮ ಸೇನೆಯ ನೀಲಕಂಠ ಕಂದಗಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.

ಶ್ರೀಸಿದ್ಧೇಶ್ವರ ಜಾತ್ರೆಯಲ್ಲಿ ಅಂಗಡಿ, ಮುಂಗಟ್ಟು ಹಾಕಲು ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ.ವಿಶ್ವ ಹಿಂದೂ ಪರಿಷತ್ ನ ಸುನಿಲ ಬೈರವಾಡಗಿ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದು, ಶ್ರೀರಾಮ ಸೇನೆಯ ಮನವಿಗೆ ಬೆಂಬಲ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next