Advertisement

ಮರಿ ಯಡಿಯೂರಪ್ಪ ಹುಟ್ಟಿಕೊಂಡನಲ್ಲ ಎಂದು ಕೆಲವರಿಗೆ ಸಮಸ್ಯೆಯಾಗಿದೆ: ವಿಜಯೇಂದ್ರ

02:53 PM Jul 24, 2022 | Team Udayavani |

ಬೆಂಗಳೂರು: ‘ನಮ್ಮ ಪಕ್ಷದವರಿಗಿಂತ ಬೇರೆ ಪಕ್ಷಗಳ ನಾಯಕರೇ ನನ್ನನ್ನು ಹೆಚ್ಚು ಪ್ರೀತಿ- ವಿಶ್ವಾಸದಿಂದ ಕಾಣುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

Advertisement

ನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ಶರಣ ವಕೀಲರ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಯಡಿಯೂರಪ್ಪ ಅವರಿಗೆ ವಯಸ್ಸಾಯಿತು. ರಾಜಕೀಯ ನಿವೃತ್ತಿಯಾದರು ಎಂಬ ಸಮಾಧಾನದ ಬೆನ್ನಲ್ಲೇ ಮರಿ ಯಡಿಯೂರಪ್ಪ ಹುಟ್ಟಿಕೊಂಡನಲ್ಲ ಎಂಬ ಸಮಸ್ಯೆಯೂ ಕೆಲವರನ್ನು ಕಾಡುತ್ತಿರಬಹುದು. ಈ ಪ್ರೀತಿ- ವಿಶ್ವಾಸದಲ್ಲಿನ ವ್ಯತ್ಯಾಸಗಳಿಗೆ ಇವೆರಡೂ ಕಾರಣ ಆಗಿರಬಹುದು” ಎಂದು ವಿಶ್ಲೇಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next