Advertisement

Vijayapura;ಶಿವಾಜಿ ಜಯಂತಿ ಮೆರವಣಿಗೆ: ಗಲಾಟೆಗೆ ಮುಂದಾದವರಿಗೆ ಪೊಲೀಸರ ಲಾಠಿ ರುಚಿ

11:42 PM Mar 04, 2024 | Team Udayavani |

ವಿಜಯಪುರ : ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಸೋಮವಾರ ರಾತ್ರಿ ಹಮ್ಮಿಕೊಂಡಿರುವ ಬೃಹತ್ ಮೆರವಣಿಗೆ ನಗರದ ರಾಮ ಮಂದಿರದಿಂದ ಶಿವಾಜಿ ವೃತ್ತದ ವರಗೆ ನಡೆಯುತ್ತಿದ್ದು, ನಗರ ಶಾಸಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಹೈದರಾಬಾದ್ ಬಿಜೆಪಿ ಶಾಸಕ ರಾಜಾಸಿಂಗ್ ನೇತೃತ್ವದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಯುವಕರು ಪಾಲ್ಗೊಂಡಿದ್ದಾರೆ.

Advertisement

ಮೆರವಣಿಗೆಯಲ್ಲಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಮೆರವಣಿಗೆ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಬರುತ್ತಿದ್ದಂತೆ ಗಲಾಟೆ ನಡೆದರೂ, ಪೊಲೀಸರು ತುರ್ತಾಗಿ ಪರಿಸ್ಥಿತಿ ನಿಭಾಯಿಸಿದ್ದು, ಮೆರವಣಿಗೆ ಮುಂದುವರೆದಿದೆ.

ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next