Advertisement

Vijayapura: ಕೆರೆಗೆ ಬಿದ್ದ ವಿದ್ಯುತ್ ತಂತಿ; ಮೀನು ಹಿಡಿಯಲು ಹೋಗಿ ಹೆಣವಾದ ಬಾಲಕರು

05:22 PM Jun 18, 2024 | keerthan |

ವಿಜಯಪುರ: ವಿದ್ಯುತ್ ತಂತಿ ಕೆರೆಯಲ್ಲಿ ಕತ್ತರಿಸಿ ಬಿದ್ದ ಕಾರಣ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ವಿಜಯಪುರ ತಾಲೂಕಿನಲ್ಲಿ ಜರುಗಿದೆ.

Advertisement

ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ಈ ದುರಂತ ಸಂಭವಿಸಿದ್ದು, ಕೆರೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಮೀನು ಹಿಡಿಯಲು ತೆರಳಿದ್ದ ಇಬ್ಬರು ಬಾಲಕರು ವಿದ್ಯುತ್ ಅವಘಡದಲ್ಲಿ ಜೀವ ಕಳೆದುಕೊಳ್ಳುವಂತಾಗಿದೆ.

ದುರಂತದಲ್ಲಿ ಮಡಿದ ಬಾಲಕರನ್ನು ದ್ಯಾಬೇರಿ ಗ್ರಾಮದ 8 ವರ್ಷದ ರೋಹಿತ ಅನೀಲ ಚವ್ಹಾಣ ಹಾಗೂ 16 ವರ್ಷದ ವಿಜಯ ಚವ್ಹಾಣ ಎಂದು ಗುರುತಿಸಲಾಗಿದೆ. ಸದರಿ ಬಾಲಕರು ಮೀನು ಹಿಡಿಯಲು ಹೋಗಿದ್ದ ಬಾಲಕರು ಕರೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸಿದೆ ನೀರಿಗೆ ಇಳಿದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ಹೊರಗೆ ತೆಗದು ಶವ ಪರೀಕ್ಷೆಗೆ ಸಾಗಿಸಲು ಮುಂದಾಗಿದ್ದು, ಮೃತ ಬಾಲಕ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next