Advertisement
ನಗದ ಸಿಂದಗಿ ರಸ್ತೆಯಲ್ಲಿರುವ ಔದುಂಬರವಾಸಿ ಶ್ರೀದತ್ತ ಮಂದಿರದಲ್ಲಿ ಜರುಗಿದ ಈ ಅಪರೂಪದ ಮದುವೆಗೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತಕ್ಕೀಡಾದ ಸಂಘದ ಪ್ರಮುಖರು. ನಗರದ ಜಾಗೃತಿ ಕಾಲೋನಿ ಅಂಕಲೀಕರ ಲೇಔಟ್ ನಿವಾಸಿ ಆಟೋ ಚಾಲಕನಾಗಿರುವ ದೈಹಿಕ ಯಾವುದೇ ನ್ಯೂನ್ಯತೆ ಇಲ್ಲದ 34 ವರ್ಷದ ಹನುಮಂತ ಪಾಂಡುರಂಗ ಮಿಸ್ಕೀನ್ (ಸಾವಜಿ) ಎಂಬ ಯುವಕ ಹಾಗೂ ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದ 28 ವರ್ಷದ ಅಂಗವಿಕಲೆ ಶಾಂತಮ್ಮ ಮಹಾದೇವಪ್ಪ ಭಜಂತ್ರಿ ಇವರೇ ನವಜೀವಕ್ಕೆ ಕಾಲಿಟ್ಟ ಅಪರೂಪದ ಜೋಡಿ. ಸರಳ ಸಮಾರಂಭದಲ್ಲಿ ಜಾತಿಯ ಹಂಗಿಲ್ಲದ, ದೈಹಿಕ ನ್ಯೂನ್ಯತೆಯ ಕೊರಗಿಲ್ಲದೇ ಇಬ್ಬರು ಹೊಸಬಾಳಿಗೆ ಸಪ್ತಪದಿ ತುಳಿದಿದ್ದಾರೆ.
Advertisement
ಜಾತಿ ಮೀರಿ ವಿಕಲಚೇತನೆಯ ಕೈಹಿಡಿದ ಆಟೋ ಚಾಲಕ
02:46 PM Aug 14, 2020 | Suhan S |
Advertisement
Udayavani is now on Telegram. Click here to join our channel and stay updated with the latest news.