Advertisement

ಮುಸ್ಲಿಮರಿಂದ ನಾಡದೇವಿಗೆ ವಿಶೇಷ ಪೂಜೆ: ಭಾವೈಕ್ಯತೆ ಸಾರಿದ ವಿಜಯಪುರ ಯುವಕರು

08:40 PM Oct 04, 2022 | Team Udayavani |

ವಿಜಯಪುರ : ಕಳೆದ ಎರಡು ವರ್ಷಗಳ ಹಿಂದೆ ನಗರದ ಅಡಕಿ ಗಲ್ಲಿ ನಾಡದೇವಿಗೆ ಬೆಳ್ಳಿ ಕಿರೀಟ ಅರ್ಪಿಸಿ ಭಾವೈಕ್ಯತೆ ಮೆರೆದಿದ್ದ ಮುಸ್ಲಿಂ ಯುವಕರು, ಈ ವರ್ಷ ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಭಾವೈಕ್ಯ ಭಕ್ತಿಯನ್ನು ಮುಂದುವರೆಸಿದ್ದಾರೆ.

Advertisement

ಆಯುಧ ಪೂಜೆಯ ಹಬ್ಬದ ಸಂದರ್ಭದಲ್ಲಿ ಅಡಕಿ ಗಲ್ಲಿ ಪರಿಸರದ ಜೋರಾಪುರ ಪೇಟೆಯ ಶ್ರೀ ಯುವಶಕ್ತಿ ಮಿತ್ರಮಂಡಳಿ ಅಡಕಿ ಗಲ್ಲಿ ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ನಾಡದೇವಿ ಮಂಟಪಕ್ಕೆ ಆಗಮಿಸಿ ಮುಸ್ಲಿಂ ಸಮುದಾಯದ ಮುಖಂಡರು, ದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲುಸಿ, ಬೃಹತ್ ಮಾಲಾರ್ಪಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದೂ ಯುವಕರು ಮುಸ್ಲಿಂ ಸಮುದಾಯದ ಯುವಕರಿಗೆ ಸಾಥ ನೀಡಿದರು.

ಇದನ್ನೂ ಓದಿ : ನಾಡಿನ ಜನತೆಗೆ ತಾಯಿ ಚಾಮುಂಡೇಶ್ವರಿ ಮಂಗಳವನ್ನುಂಟು ಮಾಡಲಿ :ಮೈಸೂರಿನಲ್ಲಿ ಸಿಎಂ ಬೊಮ್ಮಾಯಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next