Advertisement

Vijayapura: ಎಂಐಎಂ ಕಾರ್ಪೋರೇಟರ್ ಪತಿ ಮೇಲೆ ಗುಂಡಿನ ದಾಳಿ

12:01 PM May 06, 2023 | Team Udayavani |

ವಿಜಯಪುರ: ನಗರದಲ್ಲಿ ಹಾಡುಹಗಲೇ ಪಾಲಿಕೆ ಸದಸ್ಯೆಯ ಪತಿ, ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

Advertisement

ಶನಿವಾರ ನಗರದ ವಜ್ರಹನುಮಾನ ಪ್ರದೇಶದ ಚಾಂದಪೂರ ಕಾಲೋನಿ ಪ್ರದೇಶದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ರೌಡಿ ಶೀಟರ್ ಹೈದರ್ ನದಾಫ್ ಮೇಲೆ ಗುಂಡಿನ‌ ದಾಳಿ ನಡೆದಿದ್ದು, ಹೈದರ್ ರಕ್ತದ ಮಗುವಿನಲ್ಲಿ ಜೀವ ಬಿಟ್ಡಿದ್ದಾನೆ.

ಎದೆ ಹಾಗೂ ಹಣೆಗೆ ಗುಂಡುಗಳು ತಗುಲಿದ್ದು, ಆರು ಗುಂಡುಗಳು ದೇಹ ಹೊಕ್ಕಿವೆ. ಗುಂಡಿನ ದಾಳಿ ನಡೆಸಿದ ದಾಳಿಕೋರರು ಪರಾರಿಯಾಗಿದ್ದಾರೆ.

ಹೈದರ್ ಪತ್ನಿ ನಿಶಾತ್ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ನಂಬರ್ 19ರ ಎಂಐಎಂ ಪಕ್ಷದ ಸದಸ್ಯೆ.

ಪಾಲಿಕೆ ಚುನಾವಣೆ ಧ್ವೇಶ, ಹೈದರ್ ಮೇಲಿದ್ದ ವಯಕ್ತಿಕ ಧ್ವೇಷದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ ರೌಡಿ ಶೀಟರ್ ಅಗಿದ್ದ ಹೈದರ್ ನದಾಫ್ ವೈರಿಗಳನ್ನೇ ಹೆಚ್ಚು ಬೆಳೆಸಿಕೊಂಡಿದ್ದ ಎನ್ನುವುದೂ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ.

Advertisement

ಸುದ್ದಿ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next