Advertisement

ವರ್ಷದ ಹಿಂದೆ ಬಾಲ ಮಂದಿರದಿಂದ ನಾಪತ್ತೆಯಾದ ಬಾಲಕಿ : ಪ್ರಕರಣದ ಬೆನ್ನುಬಿದ್ದ ಪೊಲೀಸರು

06:17 PM Jul 09, 2021 | Team Udayavani |

ವಿಜಯಪುರ: ನಗರದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ವರ್ಷದ ಹಿಂದೆ ಕಾಣೆಯಾಗಿರುವ ಬಾಲಕಿಯೊಬ್ಬಳ ಶೋಧಕ್ಕಾಗಿ ಪೊಲೀಸರು ಬೆನ್ನುಬಿದ್ದಾರೆ.

Advertisement

2020 ಎಪ್ರೀಲ್ 12 ರಂದು ನಗರದ ಮನಗೂಳಿ ರಸ್ತೆಯಲ್ಲಿರುವ ಬಾಲಕಿಯರ ಬಾಲ ಮಂದಿರದಿಂದ 17 ವರ್ಷದ ಶ್ರುತಿ ಶಂಕರ ಶಿತೋಳಿ ಎಂಬ ಬಾಲಕಿ ಕಾಣೆಯಾಗಿದ್ದಾಳೆ.

ಈ ಕುರಿತು ಕಳೆದ ವರ್ಷ ಎಪ್ರೀಲ್ 23 ರಂದು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಬಾಲಕಿ ನಾಪತ್ತೆ ಹಿಂದೆ ಅಪಹರಣ ಮಾಡಿರುವ ಶಂಕೆಯೂ ಇದೆ ಎಂದು ಸರಕಾರಿ ಬಾಲಕಿಯರ ಬಾಲ ಮಂದಿರದ ಅಂದಿನ ಪ್ರಭಾರ ಅಧೀಕ್ಷಕಿ ಅತೀಕ ಸಿದ್ದಿ ದೂರು ನೀಡಿದ್ದರು.

ಇದನ್ನೂ ಓದಿ :ಕೊಣಜೆ : ಲಂಚ ಸ್ವೀಕಾರ ಆರೋಪ ಸಾಬೀತು :  ಪ್ರೊ.ಡಾ. ಅನಿತಾ ರವಿಶಂಕರ್ ಗೆ ಐದು ವರ್ಷ ಶಿಕ್ಷೆ

ಬಾಲಕಿ ಕಾಣೆಯಾಗಿ 15 ತಿಂಗಳಾಗುತ್ತ ಬಂದರೂ ಎಲ್ಲಿಯೂ ಆಕೆಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಕಳೆದ ವಾರದ ಹಿಂದಷ್ಟೇ ಜಲನಗರ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಎಸೈ ಎಸ್ಐ ಎಸ್.ಎಂ.ಶಿರಗುಪ್ಪಿ ವಿಶೇಷ ಆಸಕ್ತಿ ತೋರಿ ಬಾಲಕಿಯ ಶೋಧಕ್ಕೆ ಬೆನ್ನು ಬಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next