Advertisement

ವಿಜಯಪುರ : ಹಾಡ ಹಗಲೇ ಮಾರಕಾಸ್ತ್ರದಿಂದ ಕತ್ತು ಕೊಯ್ದು ವೃದ್ಧನ ಹತ್ಯೆ: ಕಾರಣ ನಿಗೂಢ

07:02 PM Dec 21, 2020 | sudhir |

ವಿಜಯಪುರ : ನಗರದಲ್ಲಿ ಹಾಡು ಹಗಲೇ ಮನೆಯಲ್ಲಿ ಇದ್ದ ವೃದ್ಧರೊಬ್ಬರ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ನಡೆದಿದೆ.

Advertisement

ನಗರದ ಗೋಡಬೋಳೆ ಮಾಳದ ತಮ್ಮ ಮನೆಯಲ್ಲಿದ್ದ 68 ವರ್ಷದ ವಿನಯ‌ ನಾಯಕ ಹತ್ಯೆಯಾದ ದುರ್ದೈವಿ.

ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಹತ್ಯೆ ಮಾಡಿರುವ ಕೊಲೆಗಾರರು ಪರಾರಿಯಾಗಿದ್ದಾರೆ. ವಿನಯ‌ ಅವರ ಕುಟುಂಬ ಸದಸ್ಯರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕುಟುಂಬ ಸದಸ್ಯರು ಮನೆಗೆ ಮರಳಿ ಬಂದಾಗ ಹತ್ಯೆಯಾದ ಕೃತ್ಯ ಬೆಳಕಿಗೆ ಬಂದಿದೆ.

ಹತ್ಯೆಗೆ ನಿಖರ ಕಾರಣ‌ ತಿಳಿದಿಲ್ಲ. ಆದರೆ ಮನೆಯಲ್ಲಿ ಕಳ್ಳತನ ಮಾಡಲು ವೃದ್ಧನ‌ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಲೇ ಎಸ್ಪಿ‌ ಅನುಪಮ್ ಅಗ್ರವಾಲ ಸ್ಥಳ ಪರಿಶೀಲನೆ ನಡೆಸಿ, ತನಿಖಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

Advertisement

ಇದನ್ನೂ ಓದಿ:ಕೊಕ್ಕಡ ಮನೆಗೆ ನುಗ್ಗಿ ದರೋಡೆ ಪ್ರಕರಣ: ಆರೋಪಿಗಳ ಪತ್ತೆಗೆ 2 ತಂಡ: ಎಸ್ಪಿ ಲಕ್ಷ್ಮಿ ಪ್ರಸಾದ್

ಪ್ರಕರಣ ದಾಖಲಿಸಿಕೊಂಡರಿರುವ ನಗರದ ಗಾಂಧಿಚೌಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next