Advertisement

ಅಗ್ನಿಅನಾಹುತಕ್ಕೆ ಗಾದಿ ಗೋದಾಮು ಭಸ್ಮ : ಲಕ್ಷಾಂತರ ರೂ. ಮೌಲ್ಯದ ಸೊತ್ತು ಬೆಂಕಿಗಾಹುತಿ

07:41 PM Jun 26, 2022 | Team Udayavani |

ವಿಜಯಪುರ : ವಿಜಯಪುರದ ಶಿವಾಜಿ ವೃತ್ತದ ಬಳಿ ಇರುವ ಪೀಠೋಪಕರಣ ಹಾಗೂ ಗಾದಿ ಇರಿಸಲಾಗಿದ್ದ ಗೋದಾಮಿನಲ್ಲಿ ಅಗ್ನಿಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

Advertisement

ಭಾನುವಾರ ಮಧ್ಯಾಹ್ನ ಅಗ್ನಿ ಅನಾಹುತ ಸಂಭವಿಸಿ, ಗೋದಾಮಿನಿಂದ ದಟ್ಟವಾದ ಹೊಗೆ ಆವರಿಸಿತು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿ ನಂದಿಸುವ ಕಾರ್ಯಕ್ಕೆ ಅಡಚಣೆಯಾದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಕೆಲವೊಂದು ಗೋಡೆಗಳನ್ನು ಕೆಡವಿ ಅಲ್ಲಿಂದ ದೊಡ್ಡಮಟ್ಟದ ಪೈಪ್‍ಗಳ ಮೂಲಕ ನೀರು ಸಿಂಪಡಣೆ ಮಾಡಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಘಟನೆಯಿಂದಾಗಿ ಗೋಡೌನ್‍ನಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಗಾದಿಗಳು ಸುಟ್ಟು ಕರಕಲಾಗಿವೆ. ನಂತರ ಸಿಬ್ಬಂದಿ ಶ್ರಮವಹಿಸಿ ಸುಟ್ಟು ಕರಕಲಾದ ಗಾದಿಗಳನ್ನು ಹೊರಕ್ಕೆ ಹಾಕಿದರು.

ಗಾಂಧೀಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

ಇದನ್ನೂ ಓದಿ : ವಿಭಜನೆ ಆಗುವುದಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ರಾಜ್ಯಗಳ ನಿರ್ಮಾಣ: ಕತ್ತಿ

Advertisement

Udayavani is now on Telegram. Click here to join our channel and stay updated with the latest news.

Next