Advertisement

Vijayapura:ಆಯುತಪ್ಪಿ ಬಿದ್ದ ಮಹಿಳೆಯ ಕಾಲಿನ ಮೇಲೆ ಹರಿದ ಬಸ್

05:22 PM May 24, 2024 | Team Udayavani |

ವಿಜಯಪುರ : ಬಸ್ ಹತ್ತುವ ವೇಳೆ ಆಯುತಪ್ಪಿ ಬಿದ್ದ ಮಹಿಳೆಯೊಬ್ಬರ ಕಾಲಿನ ಮೇಲೆ ಬಸ್‍ನ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆಸಿದೆ.

Advertisement

ಇಂಡಿ ತಾಲೂಕಿನ ಸಾಲೋಟಗಿ ಗ್ರಾಮಕ್ಕೆ ತೆರಳಲು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದ ಸಾವಿತ್ರಬಾಯಿ ಬಿರಾದಾರ ಎಂಬ ಮಹಿಳೆ ಕಾಲಿನ ಮೇಲೆ ಬಸ್‍ನ ಗಾಲಿ ಹರಿದು, ಗಾಯಗೊಂಡಿದ್ದಾರೆ. ಇದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಮಹಿಳೆ, ರಕ್ಷಣೆಗೆ ಕೂಗಿಕೊಂಡಿದ್ದಾರೆ.

ವಿಜಯಪುರ ನಗರದಿಂದ ಇಂಡಿ ಕಡೆಗೆ ಹೊರಟಿದ್ದ ಬಸ್ ಮೂಲಕ ಸಾಲೋಟಗಿ ಗ್ರಾಮಕ್ಕೆ ಹೊರಡಲು ಅನುವಾಗಿದ್ದ ಸಾವಿತ್ರಿಬಾಯಿ, ಬಸ್ ಏರುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಆದರೆ ಮಹಿಳೆ ಕೆಳಗೆ ಬಿದ್ದುದನ್ನು ಗಮನಿಸದ ಚಾಲದ ಬಸ್ ಓಡಿಸಿದ್ದರಿಂದ ಮಹಿಳೆಯ ಕಾಲಿನ ಮೇಲೆ ಬಸ್‍ನ ಚಕ್ರ ಹರಿದು, ತೀವ್ರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅಂಬ್ಯುಲೆನ್ಸ್ ಮೂಲಕ ಗಾಯಾಳು ಪ್ರಯಾಣಿಕಳನ್ನು ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next