Advertisement

ಮೆಕ್ಕೆಜೋಳ ಬೆಳೆಗಾರರಿಗೆ ಕೃಷಿ ಇಲಾಖೆ ಸೂಚನೆ

04:04 PM Jul 09, 2020 | Naveen |

ವಿಜಯಪುರ: 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾದ ತಿಕೋಟಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಕೃಷಿ ಇಲಾಖೆ ಸೂಚನೆ ನೀಡಿದೆ.

Advertisement

ಈ ಕುರಿತು ಜಂಟಿ ಹೇಳಿಕೆ ನೀಡಿರುವ ಕೃಷಿ ಅಧಿಕಾರಿ ಟಿ.ಎ. ಸೋಲಾಪುರಕರ, ಬಿ.ಆರ್‌. ಬೋರಗಿ ಅವರು, ಆರ್ಥಿಕ ನೆರವು ಪಡೆಯುವ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ (ಡಿಬಿಟಿ) ಮಾಡಲಾಗುತ್ತದೆ. ಸದರಿ ರೈತರು ತಿಕೋಟಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಮಾಹಿತಿ ನೋಂದಣಿ (ಎಫ್‌ಐಡಿ) ಮಾಡಿಸಿಕೊಳ್ಳುವುದು ಅವಶ್ಯವಾಗಿದೆ. ಅಂತಹ ರೈತರ ಖಾತೆಗೆ ಮಾತ್ರ ಹಣ ವರ್ಗಾವಣೆಯಾಗುತ್ತದೆ.

ಜಂಟಿ ಖಾತೆ ಹೊಂದಿದವರು ಒಬ್ಬರಿಗೆ ಹಣ ವರ್ಗಾವಣೆ ಮಾಡಲು 20 ರೂ. ಬಾಂಡ್‌ ಪೇಪರ್‌ನಲ್ಲಿ ನೋಟರಿ ಮಾಡಿ ಒಪ್ಪಿಗೆ ಪತ್ರ ನೀಡಬೇಕು. ಕಾರಣ ತಿಕೋಟಾ ರೈತ ಸಂಪರ್ಕ ಕೇಂದ್ರಕ್ಕೆ ಮೆಕ್ಕೆಜೋಳ ಬೆಳೆದ ರೈತರು ತಮ್ಮ ಪಹಣಿ ಉತಾರ, ರಾಷ್ಟ್ರೀಕೃತ ಬ್ಯಾಂಕ್‌ ಎಸ್‌.ಬಿ. ಖಾತೆಯ ಝರಾಕ್ಸ್‌ ಪ್ರತಿ ಭಾವಚಿತ್ರ ಹಾಗೂ ಮೊ. ಸಂಖ್ಯೆ ಸಹಿತ ನೋಂದಣಿ (ಎಫ್‌.ಐ.ಡಿ) ಮಾಡಿಕೊಳ್ಳಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next