Advertisement

ವಿಜಯಪುರ: ಗಾಂಜಾ ಸಾಗಾಟ-ಮಾರಾಟ ಮಾಡುತ್ತಿದ್ದ 6 ಜನರ ಬಂಧನ

12:06 PM Sep 16, 2020 | Mithun PG |

ವಿಜಯಪುರ: ಜಿಲ್ಲೆಯ ವಿಜಯಪುರ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 50ರ ಆಹೇರಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಸಿಂದಗಿ ಪೊಲೀಸರು ದಾಳಿ ನಡೆಸಿ 6 ಜನರನ್ನು ಬಂಧಿಸಿ, 2.300  ಕೆಜಿ ಗಾಂಜಾ ವಶಕ್ಕೆ ಪಡೆದಿದ್ಧಾರೆ.

Advertisement

ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಸುರೇಶ ಹೊನಗುಡೆಪ್ಪ ನಾಟೀಕಾರ (28), ಆಲಮೇಲದ ಬಾಬು ಮಲಾರಿ ಲಾವಟೆ (70) ಹಾಗೂ ಪಕ್ಕದ ಗುಲಬುರ್ಗಾ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ಮಡಿವಾಳಪ್ಪ ಕಲ್ಯಾಣಪ್ಪ ಪರೀಟ್ (21) ಮೂವರು ಸೇರಿಕೊಂಡು ಬೆಂಗಳೂರಿನ ಮೂಡಲ ಪಾಳ್ಯದ ಶರತ್ ಶ್ರೀನಿವಾಸ (29), ಮನೋಜ ಸುರೇಶ ಮತ್ತು ಬೆಂಗಳೂರು ಬಳಿಯ ಮಾಗಡಿಯ ನಿವಾಸಿ ಗಗನ ಕೃಷ್ಣಮೂರ್ತಿ(21) ಎಂಬುವವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ವಿಜಯಪುರ: ಅಕ್ಕ ಮಹಿಳಾ ವಿವಿ 11ನೇ ಘಟಿಕೋತ್ಸವ, PhD, ಚಿನ್ನದ ಪದಕ ವಿಜೇತರಿಗೆ ಮಾತ್ರ ಅವಕಾಶ

ಆರೋಪಿಗಳಿಂದ 25ಸಾವಿರ ರೂ. ಮೌಲ್ಯದ 2.300 ಕೆಜಿ ಗ್ರಾಂ ಗಾಂಜಾ ಮತ್ತು ಒಂದು ಶಿಫ್ಟ್ ಕಾರು ಮತ್ತು ಒಂದು ಮೋಟರ್ ಸೈಕಲ್ ವಶಕ್ಕೆ ಪಡೆದುಕೊಂಡು 6 ಜನರ ವಿರುದ್ದ ಎನ್.ಡಿ.ಪಿ.ಎಸ್ ಆ್ಯಕ್ಟ್ ಅಡಿ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:  ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದ ದನಗಳ ಕಳ್ಳತನ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next