Advertisement

ಕಾಂಗ್ರೆಸ್‌ಮನೆಕದ ತಟ್ಟಿದ ಮನಗೂಳಿ ಪುತ್ರ ಅಶೋಕ

06:28 PM Feb 27, 2021 | Shreeraj Acharya |

ವಿಜಯಪುರ: ಸಿಂದಗಿ ಉಪ ಚುನಾವಣೆ ಸಂಭವನೀಯ ಜೆಡಿಎಸ್‌ ಅಭ್ಯರ್ಥಿ, ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಕಾಂಗ್ರೆಸ್‌ ನಾಯಕರ ಸಖ್ಯ ಬೆಳೆಸಿರುವುದು ಕುತೂಹಲ ಮೂಡಿಸಿದೆ.

Advertisement

ಸಿಂದಗಿ ಕ್ಷೇತ್ರದಿಂದ ಜೆಡಿಎಸ್‌ ಶಾಸಕರಾಗಿ ಆಯ್ಕೆಯಾಗಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಸಿ. ಮನಗೂಳಿ ಈಚೆಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಹೀಗಾಗಿ ಉಪ ಚುನಾವಣೆ ಎದುರಾಗುತ್ತಿರುವ ಈ ಕ್ಷೇತ್ರದಲ್ಲಿ ರಾಜಕೀಯ ಬಿರುಸು ಕಾಣಿಸಿಕೊಂಡಿದೆ. ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಜೆಡಿಎಸ್‌ ವರಿಷ್ಠರು ಹೇಳುತ್ತಲೇ ಮನಗೂಳಿ
ಕುಟುಂಬದ ಸದಸ್ಯರು ಒಗ್ಗೂಡಿ ಚರ್ಚೆ ನಡೆಸಿದ್ದಾರೆ. ಮನಗೂಳಿ ಅವರ ನಾಲ್ವರು ಪುತ್ರರಲ್ಲಿ ಅಶೋಕ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಒಂದೊಮ್ಮೆ ನಾಲ್ವರಲ್ಲಿ ಯಾರಿಗೇ ಟಿಕೆಟ್‌ ಸಿಕ್ಕರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದಲ್ಲದೇ ಜೆಡಿಎಸ್‌
ವರಿಷ್ಠರನ್ನು ಭೇಟಿ ಮಾಡಿ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ನಿರ್ಧರಿಸಿದೆ. ಇದರ ಫಲವಾಗಿ ಸ್ಪರ್ಧಾಕಾಂಕ್ಷಿ ಮನಗೂಳಿ ಅವರ ಪುತ್ರ ಅಶೋಕ ಬೆಂಗಳೂರಿಗೆ ಧಾವಿಸಿ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಬಲಿಷ್ಠವಾಗಿಲ್ಲ. ಎಂ.ಸಿ. ಮನಗೂಳಿ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ, ಜನರೊಂದಿಗೆ ಹೊಂದಿದ್ದ ಒಡನಾಟ, ಆಪ್ತತೆ ಅವರಿಗೆ ರಾಜಕೀಯ ಮರುಜನ್ಮ ನೀಡುವಲ್ಲಿ ಸಹಕಾರಿ ಆಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಅದರಲ್ಲೂ ಉಪ ಚುನಾವಣೆಯಂಥ ಸಂದರ್ಭದಲ್ಲಿ ಬಿಜೆಪಿ ಆಡಳಿತ ಯಂತ್ರ-ಆರ್ಥಿಕ ಶಕ್ತಿ ಎದುರು ಜೆಡಿಎಸ್‌ ಸೆಣಸಲಾಗದು. ಈ ವಾಸ್ತದ ಅರಿವು ಪಕ್ಷದ ವರಿಷ್ಠರು ಅಶೋಕಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಾರಣ ಏನು?: ಎರಡು ದಶಕದಿಂದ ಕಾಂಗ್ರೆಸ್‌ ಸಿಂದಗಿ ಕ್ಷೇತ್ರವನ್ನು ಕಳೆದುಕೊಂಡಿದೆ. ಶತಾಯಗತಾಯ ಈ ಬಾರಿ ಸಿಂದಗಿಯಲ್ಲಿ ಕಾಂಗ್ರೆಸ್‌ ಶಕ್ತಿ ತೋರಬೇಕೆಂಬ ಇರಾದೆ ಆ ಪಕ್ಷದ ನಾಯಕರಿಗೆ ಇದೆ. ಸಹಕಾರಿ ವ್ಯವಸ್ಥೆಯಲ್ಲಿ ಅಶೋಕ ಅವರನ್ನು ಕಂಡಿರುವ ಮೇಲ್ಮನೆ ವಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ಎಚ್‌.ಕೆ. ಪಾಟೀಲ, ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ ಅವರಂಥ ನಾಯಕರು ಕಾಂಗ್ರೆಸ್‌ ಸೇರಲು ಸೂಚಿಸಿದ್ದಾರೆ ಎನ್ನಲಾಗಿದೆ.

ಸಿಂದಗಿ ಕ್ಷೇತ್ರದಲ್ಲಿ ಸತತ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿದ್ದು, ಹೊಸ ಮುಖದ ಹುಡುಕಾಟದಲ್ಲಿದೆ. ಅಹಿಂದ ಮತಗಳು ಒಗ್ಗೂಡಿದರೆ ಹಾಲಿ ಶಾಸಕರಾಗಿದ್ದ ಮನಗೂಳಿ ನಿಧನದ ಅನುಕಂಪ ಆಡಳಿತ ಪಕ್ಷದ ಎಲ್ಲ ರಣತಂತ್ರಗಳನ್ನು ಬಗ್ಗುಬಡಿದು ತಮ್ಮ ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಹಕಾರಿ ಆಗಲಿದೆ ಎಂದು ಅಶೋಕ ಮನಗೂಳಿಗೆ ಸಲಹೆ ನೀಡಿದ್ದಾರೆ.

ಇಂಥ ಹಲವು ಕಾರಣಗಳಿಂದಾಗಿ ಅಶೋಕ ಕಾಂಗ್ರೆಸ್‌ ಕೈ ಹಿಡಿಯಲು ನಾಯಕರನ್ನು ಸಂಪರ್ಕಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿ ವಿಧಾನಸಭೆ ವಿನಾಯಕ ಸಿದ್ದರಾಮಯ್ಯ ಅವರನ್ನೂ ಬೆಂಗಳೂರಿನಲ್ಲಿ ಭೇಟಿಯಾಗಿರುವ ಅಶೋಕ ಮಾತುಕತೆ ನಡೆಸಿದ್ದಾರೆ. ತಮ್ಮ ತಂದೆಯೊಂದಿಗೆ ಜನತಾ ಪರಿವಾರದಲ್ಲಿ ಹೊಂದಿದ್ದ ಬಾಂಧವ್ಯ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರವೇ ಅಶೋಕ ಕಾಂಗ್ರೆಸ್‌ ಕದ ತಟ್ಟಲು ಕಾರಣವಾಗಿದೆ.

Advertisement

–ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next