Advertisement

ಭಾರತಕ್ಕೆ ಮತ್ತೊಂದು ಆಘಾತ: ಟೀಂ ಇಂಡಿಯಾ ಆಲ್ ರೌಂಡರ್ ವಿಶ್ವಕಪ್ ನಿಂದಲೇ ಔಟ್

09:27 AM Jul 02, 2019 | Team Udayavani |

ಲಂಡನ್: ರವಿವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಟೀಂ ಇಂಡಿಯಾಗೆ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಗಾಯದ ಮೇಲೆ ಬರೆ ಎಳೆದಿದೆ. ಆಲ್ ರೌಂಡರ್ ವಿಜಯ್ ಶಂಕರ್ ಕಾಲ್ಬೆರಳ ಗಾಯದಿಂದಾಗಿ ವಿಶ್ವಕಪ್ ನಿಂದಲೇ ಹೊರಬಿದ್ದಿದ್ದಾರೆ.

Advertisement

ಇತ್ತೀಚೆಗಷ್ಟೇ ನೆಟ್ಸ್ ನಲ್ಲಿ ಅಭ್ಯಾಸ ಮಾಡುವ ವೇಳೆ ಜಸ್ಪ್ರೀತ್ ಬುಮ್ರಾ ಎಸೆದ ಯಾರ್ಕರ್ ಎಸೆತ ವಿಜಯ್ ಶಂಕರ್ ಕಾಲಿಗೆ ಬಡಿದಿತ್ತು. ಈ ವೇಳೆ ಕಾಲಿನ ಬೆರಳಿಗೆ ಗಾಯ ಮಾಡಿಕೊಂಡಿದ್ದ ವಿಜಯ್ ಶಂಕರ್ ಗೆ ಹೆಚ್ಚಿನ ಗಾಯವಾಗಿಲ್ಲ, ಶೀಘ್ರ ಗುಣಮುಖರಾಗುತ್ತಾರೆ ಎಂದು ಟೀಂ ಮ್ಯಾನೇಜ್ಮೆಂಟ್ ಹೇಳಿದ್ದರೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ತಮಿಳುನಾಡು ಆಲ್ ರೌಂಡರ್ ಕಣಕ್ಕಿಳಿದಿರಲಿಲ್ಲ.

ಆದರೆ ಈಗ ವಿಜಯ್ ಗಾಯದ ಗಂಭೀರತೆ ಹೆಚ್ಚಾದ ಕಾರಣ ಅವರಿಗೆ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ವರದಿಯಾಗಿದೆ. ಹೀಗಾಗಿ ಅವರು ತಂಡದಿಂದ ಹೊರಬೀಳಬೇಕಾಗಿದೆ.

ಕನ್ನಡಿಗ ಮಯಾಂಕ್ ಸೇರ್ಪಡೆ ಸಾಧ್ಯತೆ
ವಿಜಯ್ ಶಂಕರ್ ರಿಂದ ತೆರವಾದ ಸ್ಥಾನಕ್ಕೆ ಕ್ನನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಸೇರಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಈ ಬಗ್ಗೆ ಐಸಿಸಿಗೆ ಮನವಿ ಮಾಡಿರುವ ಬಿಸಿಸಿಐ, ಮಯಾಂಕ್ ಅಗರ್ವಾಲ್ ಸೇರ್ಪಡೆಗೆ ಅನುಮತಿ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next