Advertisement

ವಿಜಯ್‌ ಶಂಕರ್‌ ವಿಶ್ವಕಪ್‌ನಿಂದ ಔಟ್

01:55 AM Jul 02, 2019 | Team Udayavani |

ಬರ್ಮಿಂಗ್‌ಹ್ಯಾಮ್‌: ಆಲೌರೌಂಡರ್‌ ವಿಜಯ್‌ ಶಂಕರ್‌ ಕಾಲ್ಬೆರಳಿನ ನೋವಿನಿಂದ ವಿಶ್ವಕಪ್‌ ಕೂಟದಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಕರ್ನಾಟಕದ ಆರಂಭಕಾರ ಮಾಯಾಂಕ್‌ ಅಗರ್ವಾಲ್ ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ವಿಜಯ್‌ ಶಂಕರ್‌ ವಿಶ್ವಕಪ್‌ ತಂಡದಿಂದ ಹೊರಬಿದ್ದ ಭಾರತದ 2ನೇ ಕ್ರಿಕೆಟಿಗ. ಇದಕ್ಕೂ ಮುನ್ನ ಆರಂಭಕಾರ ಧವನ್‌ ಕೈಬೆರಳಿನ ಮೂಳೆ ಮುರಿತಕ್ಕೊಳಗಾಗಿ ಈ ಸಂಕಟಕ್ಕೆ ಸಿಲುಕಿದ್ದರು. ಇವರ ಸ್ಥಾನಕ್ಕೆ ಬಂದ ರಿಷಭ್‌ ಪಂತ್‌ ರವಿವಾರ ಇಂಗ್ಲೆಂಡ್‌ ವಿರುದ್ಧ ಮೊದಲ ವಿಶ್ವಕಪ್‌ ಪಂದ್ಯವಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next