Advertisement

ಪಾಂಡ್ಯ, ರಾಹುಲ್ ಔಟ್ : ವಿಜಯ್ ಶಂಕರ್, ಗಿಲ್ ಇನ್ 

10:00 AM Jan 13, 2019 | |

ಮುಂಬೈ: ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಅಸಭ್ಯ ಹೇಳಿಕೆ ನೀಡಿದ್ದ ಟೀಮ್ ಇಂಡಿಯಾ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ತಾತ್ಕಾಲಿಕ ಅಮಾನತು ಮಾಡಿದ ಹಿನ್ನಲೆಯಲ್ಲಿ ಶುಭ್ಮನ್ ಗಿಲ್ ಮತ್ತು ವಿಜಯ್ ಶಂಕರ್ ಅವರನ್ನು ತಂಡಕ್ಕೆ ಸೇರಿಸಿಸಿಕೊಳ್ಳಲಾಗಿದೆ. 

Advertisement

ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿ ಮತ್ತು ಮುಂಬರುವ ನ್ಯೂಜಿಲ್ಯಾಂಡ್ ವಿರುದ್ದದ ಸರಣಿಗೆ ಈ ಬದಲಾವಣೆ ಮಾಡಿಕೊಳ್ಳಲಾಗಿದೆ. ಆದರೆ ಶುಭ್ಮನ್ ಗಿಲ್ ಅವರನ್ನು ನ್ಯೂಜಿಲ್ಯಾಂಡ್ ಸರಣಿಗೆ ಮಾತ್ರ ಕರೆಸಿಕೊಳ್ಳಲಾಗಿದೆ. ವಿಜಯ್ ಶಂಕರ್ ಆಸ್ಟ್ರೇಲಿಯಾ ವಿರುದ್ದದ ಎರಡನೇ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ. 

ಪಂಜಾಬ್ ಮೂಲದ 19ರ ಹರೆಯದ ಶುಭ್ಮನ್ ಗಿಲ್ ಭಾರತ ಅಂಡರ್ 19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಿರಿಯರ ವಿಶ್ವ ಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯು ಗಿಲ್ ಗೆ ಒಲಿದು ಬಂದಿತ್ತು. 


ತಮಿಳುನಾಡು ಮೂಲದ ಆಲ್ ರೌಂಡರ್ ವಿಜಯ್ ಶಂಕರ್ ಈ ಮೊದಲು ನಿದಹಾಸ್ ಟ್ರೋಫಿಯಲ್ಲಿ ಭಾರತ ದಂಡದ ಪರ ಆಡಿದ ಅನುಭವ ಹೊಂದಿದ್ದಾರೆ. 5 ಟಿ-20 ಪಂದ್ಯಗಳ ಅನುಭವ ಹೊಂದಿರುವ ಶಂಕರ್ ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ಪರವಾಗಿ ಆಡುವ ಅಸೆ ಹೊತ್ತು ಆಸ್ಟ್ರೇಲಿಯಾಗೆ ಪ್ರಯಾಣ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next