Advertisement

‘ಕೊಂಡಾಣ ಕೇಸ್‌’ನಲ್ಲಿ ವಿಜಯ ರಾಘವೇಂದ್ರ

01:12 PM Sep 11, 2022 | Team Udayavani |

ವಿಜಯ ರಾಘವೇಂದ್ರ ನಾಯಕರಾಗಿದ್ದ “ಸೀತಾರಾಮ್‌ ಬಿನೋಯ್‌’ ಸಿನಿಮಾ ಮೂಲಕ ನಿರ್ದೇಶಕರಾದ ದೇವಿಪ್ರಸಾದ್‌ ಶೆಟ್ಟಿ ಈಗ ತಮ್ಮ ಎರಡನೇ ಚಿತ್ರಕ್ಕೆ ಮುಹೂರ್ತ ಮಾಡಿದ್ದಾರೆ. ಚಿತ್ರಕ್ಕೆ “ಕೇಸ್‌ ಆಫ್ ಕೊಂಡಾಣ’ ಎಂದು ಟೈಟಲ್‌ ಇಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಧರ್ಮಗಿರಿ ಮಂಜುನಾಥ್‌ ಸ್ವಾಮಿ ದೇಗುಲದಲ್ಲಿ ಸಿನಿಮಾ ಮುಹೂರ್ತ ನೆರವೇರಿತು.

Advertisement

ಚಿತ್ರದ ಬಗ್ಗೆ ಮಾತನಾಡುವ ವಿಜಯ ರಾಘವೇಂದ್ರ,”ಸೀತಾರಾಮ್‌ ಬಿನೋಯ್‌ ನಂತರ ಇವರು ನನಗೆ ಮತ್ತೂಮ್ಮೆ ಅವಕಾಶ ಕೊಟ್ಟಿದ್ದಾರೆ. ಸಾಧಾರಣವಾಗಿ ಒಂದೊಳ್ಳೆ ತಂಡ ಸಿಗುವುದು ಅಪರೂಪ. ನಿರ್ದೇಶಕ ದೇವಿಪ್ರಸಾದ್‌ ಡೆಡಿಕೇಶನ್‌, ಕೆಲಸದ ಬಗ್ಗೆ ಸೀರಿಯಸ್‌ನೆಸ್‌ ಇರುವ, ಬಹಳ ವಿರಳವಾಗಿ ಸಿಗುವ ಟೆಕ್ನಿಷಿಯನ್‌’ ಎಂದು ಖುಷಿ ಹಂಚಿಕೊಂಡರು.

ನಿರ್ದೇಶಕ ದೇವಿ ಪ್ರಸಾದ್‌ ಶೆಟ್ಟಿ ಈ ಬಾರಿ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. 09/2018 ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ವಿಜಯ್‌ ರಾಘವೇಂದ್ರ ಹಾಗೂ ಭಾವನಾ ಮೆನನ್‌ ಇಬ್ಬರು ಪೊಲೀಸ್‌ ಅಧಿಕಾರಿಗಳಾಗಿ ನಟಿಸಲಿದ್ದಾರೆ.

ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾತ್ವಿಕ್‌ ಹೆಬ್ಟಾರ್‌ ಮತ್ತು ದೇವಿಪ್ರಸಾದ್‌ ಶೆಟ್ಟಿ ಜೊತೆಗೆ ಅರವಿಂದ್‌ ಶೆಟ್ಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಜಯಂತ್‌ ಕಾಯ್ಕಿಣಿ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ಸಂಗೀತ, ಜೋಗಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next