Advertisement

Landslides: ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭೂಕುಸಿತ… ಸಂಚಾರ ಸ್ಥಗಿತ

06:24 PM Mar 02, 2024 | Team Udayavani |

ಶ್ರೀನಗರ: ಭಾರಿ ಮಳೆ ಮತ್ತು ಹಿಮಪಾತದ ಪರಿಣಾಮ ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

Advertisement

ಈ ಪ್ರದೇಶದಲ್ಲಿ ಸುರಿದ ,ಮಳೆ ಹಾಗೂ ಹಿಮಪಾತದ ಪರಿಣಾಮ ಭೂಕುಸಿತ ಸಂಭವಿಸಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ, ಜೊತೆಗೆ ಸಾಲುಗಟ್ಟಲೆ ವಾಹನಗಳು ಹೆದ್ದಾರಿಯಲ್ಲಿ ಸಿಲುಕಿದೆ.

ಹವಾಮಾನ ಇಲಾಖೆಯು ಈ ವಾರ ಕೇಂದ್ರಾಡಳಿತ ಪ್ರದೇಶದ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆ ಮತ್ತು ಹಿಮಪಾತವಾಗುವ ಮುನ್ಸೂಚನೆ ನೀಡಿತ್ತು, ಅದರಂತೆ ಮಾರ್ಚ್ 1 ಮತ್ತು 2 ರಂದು ಹಿಮಪಾತ ಜೊತೆಗೆ ಮಳೆಯೂ ಸುರಿದಿತ್ತು. ಪರಿಣಾಮ ಗುಡ್ಡ ಜರಿದು ಹೆದ್ದಾರಿಗೆ ಬಿದ್ದಿದೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next