Advertisement

Kanpur: ಕುಡಿದ ಮತ್ತಿನಲ್ಲಿ ವ್ಯಾಪಾರಿಯ ಗಾಡಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪೊಲೀಸ್‌ ಪೇದೆ

09:33 AM Nov 04, 2023 | Team Udayavani |

ಕಾನ್ಪುರ: ರಸ್ತೆ ಬದಿಯ ವ್ಯಾಪಾರಿಯಯೊಬ್ಬನ ಗಾಡಿಯ ಮೇಲೆ ಕುಡಿದ್ದ ಮತ್ತಿನಲ್ಲಿ ಪೊಲೀಸ್‌ ಪೇದೆಯೊಬ್ಬಮೂತ್ರ ವಿಸರ್ಜನೆ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Advertisement

ಕಾನ್ಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಇತ್ತೀಚೆಗೆ ಈ ನಡೆದಿದ್ದು, ಹೇಮಂತ್ ಕುಮಾರ್ ಮತ್ತು ಲೋಕೇಶ್ ರಜಪೂತ್ ಎಂದು ಗುರುತಿಸಲಾದ ಇಬ್ಬರು ಕಾನ್‌ಸ್ಟೇಬಲ್‌ಗಳು ಡ್ಯೂಟಿ ಸಮಯದಲ್ಲಿ ತಿಂಡಿ ತಿನ್ನಲೆಂದು ಸ್ಥಳೀಯ ಅಂಗಡಿಯೊಂದಕ್ಕೆ ಹೋಗಿದ್ದ ವೇಳೆ ಈ ಕೃತ್ಯವನ್ನುವೆಸಗಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಲೋಕೇಶ್ ಅಂಗಡಿಯವನ ಜೊತೆ ಸುಖಾಸುಮ್ಮನೆ ಜಗಳ ಆಗುವ ರೀತಿ ಮಾತನಾಡಿದ್ದಾರೆ. ಇದೇ ವೇಳೆ ಇದ್ದಕ್ಕಿದ್ದಂತೆ ಲೋಕೇಶ್‌ ಗಾಡಿಯ ಮೇಲೆ ಮೂತ್ರ‌ ವಿಸರ್ಜಿಸಿ ವಿಕೃತಿ ಮೆರೆದಿದ್ದಾರೆ.

ಈ ವೇಳೆ ಲೋಕೇಶ್‌ ನನ್ನು ಸ್ಥಳೀಯರು ತಡೆಯಲು ಮುಂದಾದಾಗ ಲೋಕೇಶ್ ಅವರೊಂದಿಗೂ ವಾಗ್ವಾದ ನಡೆಸಿದ್ದಾರೆ. ಬಳಿಕ ಜನರ ಬಳಿ ಕ್ಷಮೆ ಕೇಳಿ ಇಬ್ಬರೂ ಅಲ್ಲಿಂದ ತೆರಳಿದ್ದಾರೆ.

ಘಟನೆ ನಡೆಯುವ ವೇಳೆ ಪೊಲೀಸರು ಅಲ್ಲೇ ಇದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಇದರ ವಿಡಿಯೋ ವೈರಲ್‌ ಆದ ಬಳಿಕ ಅಧಿಕಾರಿಗಳು ಇಬ್ಬರು ಪೇದೆಗಳನ್ನು ಅಮಾನತು ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಕಾನ್ಪುರ ಪೊಲೀಸ್‌ನ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಲಖನ್ ಯಾದವ್, “ಪ್ರಸ್ತುತ ಡಯಲ್ 112 ವಿಭಾಗದಲ್ಲಿ ನಿಯೋಜನೆಗೊಂಡ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು”ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next