Advertisement

Aditya Sarwate: ವಿದರ್ಭ ಕ್ರಿಕೆಟಿಗ ಆದಿತ್ಯ ಸರ್ವಟೆ ಕೇರಳ ತಂಡಕ್ಕೆ

10:20 PM Aug 24, 2024 | Team Udayavani |

ನಾಗ್ಪುರ: ವಿದರ್ಭ ತಂಡದ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆದಿತ್ಯ ಸರ್ವಟೆ ಪ್ರಸಕ್ತ ದೇಶಿ ಕ್ರಿಕೆಟ್‌ ಋತುವಿನಿಂದ ಕೇರಳ ಪರ ಆಡಲಿದ್ದಾರೆ. ಇದರೊಂದಿಗೆ ಅವರ ಹಾಗೂ ವಿದರ್ಭ ತಂಡದ 9 ವರ್ಷಗಳ ಕ್ರಿಕೆಟ್‌ ನಂಟು ಕೊನೆಗೊಳ್ಳಲಿದೆ.

Advertisement

ನಾಗ್ಪುರ ಮೂಲದ ಆದಿತ್ಯ ಸರ್ವಟೆ, ವಿದರ್ಭ ತಂಡದ ರಣಜಿ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ತಂಡ ಸತತ ರಣಜಿ ಚಾಂಪಿಯನ್‌ ಆಗುವಲ್ಲಿ ಇವರ ಕೊಡುಗೆ ಮಹತ್ವದ್ದಾಗಿತ್ತು. 61 ಪಂದ್ಯಗಳಿಂದ 1,958 ರನ್‌ ಹಾಗೂ 276 ವಿಕೆಟ್‌ ಸಂಪಾದಿಸಿದ್ದು ಇವರ ಸಾಧನೆ. ಹಿರಿಯ ಕೋಚಿಂಗ್‌ ಸಿಬಂದಿ ಜತೆಗಿನ ಮನಸ್ತಾಪವೇ ವಿದರ್ಭ ತೊರೆಯಲು ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next