Advertisement

MUDA Scam: ನನ್ನ ಹೋರಾಟಕ್ಕೆ ಸಂದ ಜಯ: ಸ್ನೇಹಮಯಿ ಕೃಷ್ಣ

12:30 AM Oct 19, 2024 | Team Udayavani |

ಮೈಸೂರು: ಮುಡಾ ಮೇಲೆ ಇಡಿ ದಾಳಿಯಾಗಿ ರುವುದು ನನ್ನ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ದೂರು ದಾರ ಸ್ನೇಹ ಮಯಿ ಕೃಷ್ಣ ಸುದ್ದಿಗಾರರ ಬಳಿ ಹೇಳಿದರು.

Advertisement

ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ನಾನು ದೂರು ನೀಡಿಲ್ಲ. ಮುಡಾ ಭ್ರಷ್ಟಾಚಾರ ಬಯಲಿಗೆಳೆಯಲು ದೂರು ನೀಡಿದ್ದೇವೆ.

ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಹೋರಾಟ ನಿಲ್ಲದು ಎಂದರು. ಸಂಬಂಧಪಟ್ಟವರು ಅಗತ್ಯ ದಾಖಲೆ ನೀಡದಿದ್ದರೆ ಇಡಿ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ಮುಡಾ 50:50 ಹಗರಣ ಪ್ರಕರಣ ಸಂಬಂಧ ಇಡಿಗೆ ಹಲವು ದಾಖಲೆ ನೀಡಿದ್ದೆ . ಅದಕ್ಕೆ ಪೂರಕ ದಾಖಲೆಗಳ ಸಂಗ್ರಹಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನನ್ನ ಹೋರಾಟಕ್ಕೆ ಗೆಲುವು ನಿಶ್ಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next