Advertisement

ಆರೋಪಿಗಳಿಗೆ 2 ತಿಂಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿ: ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ !

09:44 AM Dec 05, 2019 | Mithun PG |

ಹೈದರಬಾದ್: ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಸಂತ್ರಸ್ಥೆಯ ತಂದೆ ಆರೋಪಿಗಳನ್ನು ಎರಡು ತಿಂಗಳಲ್ಲಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದಾರೆ.ಆರೋಪಿಗಳಿಗೆ ಎರಡು ತಿಂಗಳಲ್ಲಿ ಶಿಕ್ಷೆ ವಿಧಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Advertisement

ನನ್ನ ಮಗಳು ಹಿರಿಯ ವೈದ್ಯರನ್ನು ಭೇಟಿಯಾಗಿ ಟೋಲ್ ಪ್ಲಾಝಾ ಸಮೀಪ ನಿಲ್ಲಿಸಿದ್ದ ಸ್ಕೂಟಿಯನ್ನು ತೆಗೆದುಕೊಂಡು ಹೋಗಲು 9ಗಂಟೆ ರಾತ್ರಿಗೆ ಸ್ಥಳಕ್ಕೆ ಆಗಮಿಸಿದ್ದಳು. ಆ ವೇಳೆ ಸ್ಕೂಟಿ ಪಂಕ್ಚರ್ ಆಗಿರುವುದು ಆಕೆಯ ಗಮನಕ್ಕೆ ಬರುತ್ತದೆ. ಆಗ ಸಹಾಯ ಮಾಡುವ ನೆಪದಲ್ಲಿ ಅಲ್ಲಿಗೆ ಬಂದ ಮದ್ಯಪಾನ ಮಾಡಿದ್ದ ಲಾರಿ ಚಾಲಕರು ಸ್ಕೂಟಿಯನ್ನ ಪರಿಶೀಲಿಸಿ ರಿಪೇರಿ ಮಾಡುವುದು ಕಷ್ಟವೆಂದರು. ಆವರ ಮಾತನ್ನು ನನ್ನ ಮಗಳು ನಂಬಿದ್ದಳು, ಅದೇ ವೇಳೆ ದುರುಳರು ಆಕೆಯ ಮೇಲೆ ಅತ್ಯಾಚಾರ ಮಾಡಿ, ಸುಟ್ಟು ಹಾಕಿ ದುಷ್ಕೃತ್ಯ ಮೆರದರು ಎಂದು ಕಣ್ಣೀರಿಟ್ಟಿದ್ದಾರೆ.

ಘಟನೆ ನಡೆಯುವ ಮೊದಲು 9.45ರ ಹೊತ್ತಿಗೆ ಸಹೋದರಿಗೆ ಕರೆ ಮಾಡಿ, ತನ್ನ ಸ್ಕೂಟಿ ಪಂಕ್ಚರ್ ಆಗಿದ್ದು ಯಾರೋ ತನಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾಳೆ. ಅವರು ಪಂಕ್ಚರ್ ಹಾಕಿಸಲು ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ತನಗೆ ಭಯವಾಗುತ್ತಿದೆ ಇಲ್ಲಿ ಸುತ್ತಮುತ್ತ ಲಾರಿ ಡ್ರೈವರ್ಸ್ ಇದ್ದಿರುವುದಾಗಿ ಆತಂಕ ವ್ಯಕ್ತಪಡಿಸಿದ್ದಾಳೆ. ಆವಳು ಬರುವುದು ತಡವಾಗಬಹುದೆಂದು ನಾವು ಭಾವಿಸಿದ್ದೇವು. ಆದರೆ ಒಂದು ಗಂಟೆ ಕಳೆದ ನಂತರವೂ ಬಾರದಿದ್ದಾಗ ಆತಂಕವಾಗಿ ಎಲ್ಲೆಡೆ ಹುಡುಕಾಡಿದೆವು. ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದೆವು ಎಂದಿದ್ದಾರೆ.

ದೇಶದಲ್ಲಿ ಕಾನೂನುಗಳಿವೆವೆ. ಆದರೆ ಯಾವುದು ಕೂಡ ಸರಿಯಾಗಿ ಜಾರಿಯಾಗುತ್ತಿಲ್ಲ. ನಿರ್ಭಯಾ ಅತ್ಯಾಚಾರಿಗಳಿಗೆ ಇಷ್ಟು ವರುಷವಾದರೂ ಗಲ್ಲಿ ಶಿಕ್ಷೆ ವಿಧಿಸಿಲ್ಲ. ಇಂದು ವ್ಯವಸ್ಥಿತ ಕಾನೂನು ಜಾರಿಯಾಗಿದ್ದರೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿದ್ದವು. ದೇಶದ ಪ್ರಧಾನ ಮಂತ್ರಿಯವರಲ್ಲಿ ಇಂತಹ ಅಪರಾಧಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಕಾನೂನು ರೂಪಿಸಬೇಕೆಂದು ಇದೇ ವೇಳೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next