Advertisement

ರಾಮಮಂದಿರ ನಿರ್ಮಾಣ ಶೀಘ್ರ: VHP ಮುಖ್ಯಸ್ಥ

10:49 AM Apr 24, 2018 | Team Udayavani |

ಅಯೋಧ್ಯೆ: ವಿಶ್ವ ಹಿಂದೂ ಪರಿಷತ್‌ ಗೆ ಆಯ್ಕೆಯಾದ ಹೊಸ ಮುಖ್ಯಸ್ಥ ವಿಷ್ಣು ಸದಾಶಿವ್‌ ಕೊಕ್ಜೆ ಸೋಮವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ್‌ ಲಲ್ಲಾಗೆ ಭೇಟಿ ನೀಡಿದ್ದಾರೆ. ಅಲ್ಲದೆ ಭವ್ಯ ರಾಮಮಂದಿರ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದೂ ಅವರು ಈ ವೇಳೆ ಹೇಳಿದ್ದಾರೆ. ಅಧಿಕಾರ ವಹಿಸಿಕೊಂಡು ಕಾರ್ಯಾರಂಭ ಮಾಡುವ ಮೊದಲು ರಾಮ್‌ ಲಲ್ಲಾ ದರ್ಶನ ಮಾಡಲು ಬಯಸಿದ್ದೆ. ಹೀಗಾಗಿ ಅಯೋಧ್ಯೆಗೆ ಭೇಟಿ ನೀಡಿದ್ದೇನೆ ಎಂದಿದ್ದಾರೆ. ಅನಂತರ ಅವರು ದೇಗುಲದ ವೈದಿಕರು ಹಾಗೂ ರಾಮಜನ್ಮಭೂಮಿ ನ್ಯಾಸ್‌ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೇಶದ ಎಲ್ಲ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ. ಈ ಪ್ರಕರಣದಲ್ಲಿನ ದೂರುದಾರರು ಹೊರಗಿನವರು. ಅವರಿಗೆ ಇಲ್ಲಿನ ಸ್ಥಿತಿಗತಿಗಳು ತಿಳಿದಿಲ್ಲ ಎಂದೂ ಕೊಕ್ಜೆ ಆಕ್ಷೇಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next