Advertisement

‘ಆ ಗಂಡಿಗೆ ಉತ್ತರ ಕೊಡುತ್ತೇನೆ’ : ಮತ್ತೆ ರಾಮನಗರದಲ್ಲಿ “ಗಂಡಿನ ಗದ್ದಲ”

01:15 PM Jun 14, 2022 | Team Udayavani |

ಬೆಂಗಳೂರು: ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಮತ್ತೆ ವಾಗ್ವಾದ ತಾರಕಕ್ಕೆ ಏರಿದ್ದು “ಆ ಗಂಡಿಗೆ ಉತ್ತರ ಕೊಡುತ್ತೇನೆ” ಎಂದು ಶಿವಕುಮಾರ್ ತಿರುಗೇಟು ನೀಡಿದ್ದಾರೆ.

Advertisement

ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದ್ದ ಅಶ್ವತ್ಥನಾರಾಯಣ, ಡಿ.ಕೆ‌.ಶಿವಕುಮಾರ್ ಗೆ ಇಡಿ, ಐಟಿ ಅನುಭವ ಚೆನ್ನಾಗಿದೆ. ಅವರು ತಿಹಾರ್ ಕಡೆ ಪ್ರಯಾಣ ಬೆಳೆಸಬೇಕು ಎಂದು ವ್ಯಂಗ್ಯವಾಡಿದ್ದರು. ಇದರಿಂದ ಕೆರಳಿರುವ ಶಿವಕುಮಾರ್, ‘ಆ ಗಂಡಿಗೆ ಉತ್ತರ ನೀಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:ಬಿ.ವಿ.ಶ್ರೀನಿವಾಸ್ ಗೆ ರನ್ನಿಂಗ್ ರೇಸ್ ನಲ್ಲಿ ಉಜ್ವಲ ಭವಿಷ್ಯವಿದೆ: ಸಿ.ಟಿ.ರವಿ ಟಾಂಗ್‌

ದೇಶದಲ್ಲೇ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅತ್ಯಂತ ಭ್ರಷ್ಟ. ಪ್ರತಿಯೊಂದು ಹುದ್ದೆಗೂ ಲಂಚ ಕೊಡಲೇಬೇಕು. ಪಿಎಸ್ಐ ಪ್ರಕರಣ ಹೊರಬಂದ ಕಾರಣ ಮತ್ತೊಂದು ಪ್ರಕರಣ ಮುಚ್ಚಿ ಹಾಕಿದ್ದಾರೆ‌. ತಲಾ 2-5 ಲಕ್ಷ ಹಣ ಪಡೆದು ತೆಪ್ಪಗಾಗಿದ್ದಾರೆ. ಈಗ ಅವರ ಕುಟುಂಬ ಸದಸ್ಯರಿಗೆ ವಾಪಸ್ ಕೊಡುತ್ತಿದ್ದಾರೆ. ಆ ಗಂಡಿಗೆ ಉತ್ತರ ಕೊಡುತ್ತೇನೆ. ಇದೆಲ್ಲಾ ಜನರಿಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಡಿಕೆ ಶಿವಕುಮಾರ್ ಏಕವಚನದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next