ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
Advertisement
ಮುಂದಿನ ಡಿಸೆಂಬರ್ ಒಳಗೆ ಶಿಲಾನ್ಯಾಸಗೊಂಡಿರುವ ಕೋಟ್ಯಂತರ ರೂ. ಮೊತ್ತದ ತಾಲೂಕಿನ ಹೆಚ್ಚಿನ ರಸ್ತೆಗಳ ಉದ್ಘಾಟನೆಯ ಇಚ್ಛೆ ಹೊಂದಿದ್ದು ಇದಕ್ಕೆ ಗುತ್ತಿಗೆದಾರರು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಬೇಕಾಗಿದೆ. ಅಕ್ರಮ- ಸಕ್ರಮ ಯೋಜನೆಯಡಿ ತಾಲೂಕಿನಲ್ಲಿ ಈವರೆಗೆ 20 ಸಾವಿರ ಹಕ್ಕುಪತ್ರವನ್ನು ಕೈಯಾರೆ ನೀಡಿದ್ದು 94ಸಿ ಅಡಿಯಲ್ಲಿ 15 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ತನ್ನ ಅಧಿಕಾರಾವಧಿ ಮುಗಿಯುವುದರೊಳಗೆ ವಿಲೇವಾರಿ ಮಾಡಲಾಗುವುದು ಎಂದರು.
Related Articles
ಶಾಸಕ ಕೆ. ವಸಂತ ಬಂಗೇರ ಅವರನ್ನು ಬೆಳ್ಳಿ ಕಿರೀಟ ತೊಡಿಸಿ ಸಮ್ಮಾನಿಸಲಾಯಿತು. ಅನುದಾನ ಲಭಿಸುವಲ್ಲಿ ಸಹಕಾರ ನೀಡಿದ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ ಅವರನ್ನು ಸಮ್ಮಾನಿಸಲಾಯಿತು. ಸಂಗೀತ ರಸಮಂಜರಿ ಜರಗಿತು. ಎಂ. ಕೆ. ಆರಿಗ ಸ್ವಾಗತಿಸಿ, ಕರುಣಾಕರ ಸುವರ್ಣ ವಂದಿಸಿದರು. ವಿಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Advertisement
ಮುಖ್ಯಮಂತ್ರಿಗೆ ಮನವಿಗರ್ಭಿಣಿ, ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ಮಾತೃಪೂರ್ಣ ಯೋಜನೆ ಉತ್ತಮವಾದುದು. ಆದರೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕುಚ್ಚಲಕ್ಕಿ ಅನ್ನ ನೀಡಬೇಕು, ಜತೆಗೆ ಅಂಗನವಾಡಿ ಕೇಂದ್ರಕ್ಕೆ ಮತ್ತೋರ್ವ ಸಹಾಯಕರನ್ನು ನೇಮಿಸಬೇಕು ಮತ್ತು ಕಾರ್ಯಕರ್ತರ ಗೌರವ ಧನ ಹೆಚ್ಚಿಸಬೇಕು ಎಂಬ ಮನವಿಯನ್ನು ಮುಖ್ಯಮಂತ್ರಿಗೆ ಶೀಘ್ರದಲ್ಲೇ ಸಲ್ಲಿಸುತ್ತೇನೆ.
– ಕೆ. ವಸಂತ ಬಂಗೇರ, ಶಾಸಕರು