Advertisement

ಉಡುಪಿ ಕಾಲೇಜು ಸಂಘರ್ಷ: ನಿಷ್ಪಕ್ಷಪಾತ ತನಿಖೆಗೆ ಮೊಯಿಲಿ ಆಗ್ರಹ

07:58 PM Feb 12, 2022 | Team Udayavani |

ಬೆಂಗಳೂರು: ಉಡುಪಿ ಕಾಲೇಜಿನಲ್ಲಿ ಮೊಳಕೆಯೊಡೆದ ಸಂಘರ್ಷದ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಈ ಬೆಳವಣಿಗೆ ಯಾಕಾಯಿತು? ಇದರ ಹಿಂದಿನ ಮೂಲ ಉದ್ದೇಶವೇನು? ಯಾವ ವ್ಯಕ್ತಿಗಳು, ಸಂಘ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡಿವೆ ಮುಂತಾದವುಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ.  ತನಿಖೆಯ ವರದಿಯನ್ನು  ಪುನಃ ಶಿಕ್ಷಣ ತಜ್ಞರ, ಚಿಂತಕರ ಸಭೆ ಕರೆದು ಚರ್ಚಿಸಿ, ಮುಂದೆ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು  ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next