Advertisement

ವೀರಭದ್ರೇಶ್ವರ ಕಾರ್ತಿಕೋತ್ಸವ

09:50 PM Dec 30, 2021 | Girisha |

ಮುದಗಲ್ಲ: ಪಟ್ಟಣದ ಹಳೇಪೇಟೆಯಲ್ಲಿನ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನವಾಯಿತು. ಬೆಳಗ್ಗೆ ಉತ್ಸವ ಮೂರ್ತಿಗೆ ಎಲೆಕಟ್ಟು ಸೇವೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಹಳೇಪೇಟೆ ದೇವರ ಬಾವಿಯಿಂದ ಕಳಶಗಳ ಮೆರವಣಿಗೆ ಮಾಡುತ್ತ ದೇಗುಲಕ್ಕೆ ಕಳಸಾರೋಹಣ ನೆರವೇರಿಸಲಾಯಿತು. ದಾರಿಯುದ್ದಕ್ಕೂ ಪುರವಂತರ ಸೇವೆ ಗಮನ ಸೆಳೆಯಿತು. ವೀರಭದ್ರೇಶ್ವರ ದೇವರ ಒಡಪು ಹೇಳಿ ಶಸ್ತ್ರ ಹಾಕಿದರು. ಈ ವೇಳೆ ವೀರಭದ್ರೇಶ್ವರ ದೇವಸ್ಥಾನದ ಯುವ ಬಳಗದವರು ಹಾಗೂ ಭಕ್ತರು ಇದ್ದರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next