Advertisement

ಸಖತ್ ಸದ್ದು ಮಾಡುತ್ತಿದೆ ‘ವಾಸಂತಿ ನಲಿದಾಗ’ ಹಾಡು

05:19 PM Aug 08, 2022 | Team Udayavani |

“ವಾಸಂತಿ ನಲಿದಾಗ’ ಹೀಗೊಂದು ವಿಭಿನ್ನ ಶೀರ್ಷಿಕೆ ಹೊತ್ತ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಈ ಚಿತ್ರದ ವಿಡಿಯೋ ಸಾಂಗ್‌ ಬಿಡುಗಡೆಯಾಗಿ ಸೋಶಿಯಲ್‌ ಮೀಡಿಯಾ ಅಂಗಳದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

Advertisement

ಸದ್ಯ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲೂ ಬಿಝಿಯಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ “ಕೇಳ್ರಪ್ಪೋ ಕೇಳಿ’ ಹಾಡು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚಿನ ವೀವ್ಸ್‌ ಪಡೆದುಕೊಂಡಿದೆ. ಗೌಸ್‌ ಫೀರ್‌ ಸಾಹಿತ್ಯದ ಈ ಹಾಡಿಗೆ ಶ್ರೀಗುರು ಅವರ ಸಂಗೀತ ನಿರ್ದೇಶನವಿದೆ.

ಶಶಾಂಕ್‌ ಶೇಷಗಿರಿ, ಪ್ರಿಯಾಂಕಾ, ಶ್ರೀಗುರು ಹಾಡಿಗೆ ಧ್ವನಿಯಾಗಿದ್ದಾರೆ. ನವ ಪ್ರತಿಭೆಗಳೇ ತುಂಬಿರುವ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ರೋಹಿತ್‌ ಶ್ರೀಧರ್‌, ಭಾವನಾ ಶ್ರೀನಿವಾಸ್‌, ಜೀವಿತ ವಸಿಷ್ಠ ನಟಿಸಿದ್ದಾರೆ. ಜೇನುಗೂಡು ಕೆ.ಎನ್‌.ಶ್ರೀಧರ್‌ ಬಂಡವಾಳ ಹೂಡಿದ್ದು, ರವೀಂದ್ರ ವಂಶಿ ಆಕ್ಷನ್‌ ಕಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next