Advertisement

ಚಹಾ ಕುಡಿಯುವ ನೆಪದಲ್ಲಿ ಬಿಜೆಪಿಗೆ ಕರೆದುಕೊಂಡಿದ್ದರು! ಮರಳಿ ಕೈ ಸೇರಿದ ಕಾರ್ಪೋರೇಟರ್

09:47 AM Dec 06, 2019 | Team Udayavani |

ಬೆಂಗಳೂರು: ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದ ಕಾಂಗ್ರೆಸ್ ಕಾರ್ಪೋರೇಟರ್ ವಸಂತ್ ಕುಮಾರ್ ಅವರು ಮತ್ತೆ ಕೈ ತೆಕ್ಕೆಗೆ ಮರಳಿದ್ದಾರೆ.

Advertisement

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಂಗಿ ರಾಮನಗರ ವಾರ್ಡ್ ನ ಕಾರ್ಪೋರೇಟರ್ ವಸಂತ್ ಕುಮಾರ್ ಅವರನ್ನು ದಿನೆಶ್ ಗುಂಡೂರಾವ್ ಮನವೊಲಿಸಿ ಕಾಂಗ್ರೆಸ್ ಗೆ ಕರೆದುಕೊಂಡು ಬಂದಿದ್ದಾರೆ.

ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ಈ ಚುನಾವಣೆಯಲ್ಲಿ ಬಿಜೆಪಿಯವರು ಏನೆನ್ ಮಾಡ್ತಿದಾರೆ ಎಂದು ಗೊತ್ತಾಗುತ್ತಿದೆ. ವಸಂತಕುಮಾರ್ ನಮ್ಮ ಜೊತೆಯಲ್ಲಿಯೇ ಇದ್ದರು.

ಅವರಿಗೆ ಟೀ ಕುಡಿಯುವ ನೆಪ ಮಾಡಿ ಅವರನ್ನು ಕರೆದುಕೊಂಡು ಹೋಗಿ ಹೂಬೊಕ್ಕೆ ಕೊಟ್ಟು ಫೋಟೊ ತೆಗೆದುಕೊಂಡು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಅವರು ಒತ್ತಡಕ್ಕೆ ಒಳಗಾಗಿದ್ದರು. ಆದರೆ ಬಿಜೆಪಿಯವರ ಒತ್ತಡಕ್ಕೆ ಒಳಗಾಗದೆ ಮಾತೃಪಕ್ಷಕ್ಕೆ ಬಂದಿದ್ದಾರೆ. ಇದರಲ್ಲಿ ಸ್ವತ ಸಿಎಂ ಇದರಲ್ಲಿ ಭಾಗಿಯಾಗಿರುವುದು ಖಂಡನೀಯ. ಅವರು ಯಾವ ಪರಿಸ್ಥಿತಿಗೆ ಹೋಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಬಿಜೆಪಿ ಈ ರೀತಿಯ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next